ಸೋಮವಾರ, ಜನವರಿ 18, 2010

ಪತ್ರಿಕಾ ಪ್ರಕಟಣೆ - ಅರಸೀಕೆರೆ ನಗರ ಠಾಣೆ

ಪತ್ರಿಕಾ ಪ್ರಕಟಣೆ
ಅರಸೀಕೆರೆ ನಗರ ಪೊಲೀಸರಿಂದ ಕೊಲೆಗಾರರ ಬಂಧನ

ದಿನಾಂಕ ೧೮/೧೨/೨೦೦೯ ರಂದು ಅರಸೀಕೆರೆ ಟೌನ್ ೬ನೇ ಕ್ರಾಸ್, ಮಲ್ಲೇಶ್ವರ ನಗರ ಎಡಭಾಗದಲ್ಲಿರುವ ಪಿರ್ಯಾಧಿಯವರಾದ ಈಶ್ವರಪ್ಪರವರ ಬಾಬ್ತು ಮನೆಯಲ್ಲಿ ಇವರ ಹೆಂಡತಿ ಮೃತೆ ಗಂಗಮ್ಮ ಒಬ್ಬಳೇ ಇದ್ದು ಯಾರೋ ದುರಾತ್ಮರು ಯಾವುದೋ ಉದ್ದೇಶದಿಂದ ಮಧ್ಯಾಹ್ನ ೦೨-೩೦ ರಿಂದ ಸಂಜೆ ೦೫-೩೦ ರ ಸಮಯದ ಮದ್ಯದಲ್ಲಿ ಇವರ ವಾಸದ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಮೃತೆ ಗಂಗಮ್ಮನ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ಬಾಯಿಗೆ ಬಟ್ಟೆಯನ್ನು ತುರುಕಿ ಸೆರಗಿನಿಂದ ಕುತ್ತಿಗೆಯನ್ನು ಬಿಗಿದು ಸಾಯಿಸಿ ಮೈಮೇಲಿದ್ದ ಚಿನ್ನಾಭರಣಗಳನ್ನು ಹಾಗೂ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳು ಹಾಗೂ ಹಣವನ್ನು ದುರಾತ್ಮರು ದೋಚಿಕೊಂಡು ಹೋಗಿರುತ್ತಾರೆಂದು ಮುಂದಿನ ಕ್ರಮದ ಬಗ್ಗೆ ಕೊಟ್ಟ ಪಿರ್ಯಾಧು ಮೇರೆಗೆ ಠಾಣಾ ಮೊ.ನಂ. ೧೪೩/೦೯ ಕಲಂ ೩೦೨, ೩೯೪ ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತೆ.

೧) ಮಂಜುನಾಥ @ ಮಂಜು ಬಿನ್ ದುರ್ಗಪ್ಪ @ ಹನುಮಂತಪ್ಪ, ೨೨ ವರ್ಷ, ಬೆಸ್ತರು, ಎನ್.ಟಿ.ಟಿ.ಎಫ್. ಪ್ಯಾಕ್ಟರಿ, ೨ನೇ ಹಂತ, ಪೀಣ್ಯ, ಬೆಂಗಳೂರು. ಸ್ವಂತ ಸ್ಥಳ: ಕರ್ಜಗೆ ಗ್ರಾಮ, ಹಾವೇರಿ ತಾ, ಹಾವೇರಿ ಜಿಲ್ಲೆ.
೨) ಗೌತಮ್ ಬಿನ್ ಕೃಷ್ಣಪ್ಪ, ೨೦ ವರ್ಷ, ಕೊರಮ ಜನಾಂಗ, ಅಂದರಹಳ್ಳಿ ಮುಖ್ಯ ರಸ್ತೆ, ಚೇತನಾ ವೃತ್ತದ ಹತ್ರಿರ, ೨ನೇ ಹಂತ, ಪೀಣ್ಯ, ಬೆಂಗಳೂರು. ಸ್ವಂತ ಸ್ಥಳ: ಅರೇನಹಳ್ಳಿ, ಶ್ರೀರಾಂಪುರ ಹೋಬಳಿ, ಹೊಸದುರ್ಗ ತಾ ಚಿತ್ರದುರ್ಗ ಜಿಲ್ಲೆ.
೩) ಶಶಿಕುಮಾರ ಬಿನ್ ಲಕ್ಷ್ಮಣ ಶೆಟ್ಟಿ, ೨೦ ವರ್ಷ, ಕೊರಮ ಜನಾಂಗ, ಸಿಂಗಟಗೆರೆ, ಜಾವಗಲ್ ಹೋಬಳಿ, ಅರಸೀಕೆರೆ ತಾ ಹಾಸನ ಜಿಲ್ಲೆ. ರವರುಗಳನ್ನು ದಿನಾಂಕ ೧೫/೦೧/೨೦೧೦ ರಂದು ಬಂಧಿಸಿ ಇವರ ಬಳಿ ಇದ್ದ

೧) ನೋಕಿಯಾ ೧೧೦೦ ಮೊಬೈಲ್ ಹ್ಯಾಂಡ್ಸೆಟ್ ೪೦ ಗ್ರಾಂ ತೂಕದ ಚಿನ್ನದ ಚೈನ್
೨) ಕೆಎ-೦೫-ಇಎಲ್-೨೩೮೮ ರ ಟಿ.ವಿ.ಎಸ್. ಮ್ಯಾಕ್ಸ್ ೧೦೦
೩) ಕೆಎ-೧೩-ಯು-೧೯೬೩ ಹಿರೋ ಹೋಂಡಾ ಸ್ಪೈಂಡರ್ ಪ್ಲಸ್
೪) ಕೆಎ-೦೨-ಇಡಬ್ಲ್ಯೂ-೩೧೧೫ ಹೀರೋ ಹೋಂಡಾ ಪ್ಯಾಶನ್
೫) ಒಂದು ಜೊತೆ ಚಿನ್ನದ ಓಲೆ, ಒಂದು ರೋಲ್ ಗೋಲ್ಡ್ ಕಲರ್ನ ಲೇಡಿಸ್ ವಾಚ್, ಒಂದು ಪಂಚ ಲೋಹದ ಕಡ್ಡಿ, ಒಂದು ಚಿನ್ನದ ತಾಳಿ, ೨ ಕಪ್ಪು ಕರಿಮಣಿ, ೨ ಕೆಂಪು ಹವಳ ೧೧ ಗ್ರಾಂ ೭೫೦ ಮಿಲಿ ತೂಕವಿರುವ ಒಂದು ಕಪ್ಪು ಡಾಲರ್ ಇರುವ ಚಿನ್ನದ ಚೈನ್ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರಿಂದ ಒಟ್ಟು ಅಂದಾಜು ೨,೦೦,೦೦೦ ರೂ ಬೆಲೆಯ ಚಿನ್ನಾಭರಣಗಳು, ಮೋಟಾರ್ ಸೈಕಲ್ಗಳು, ಮೊಬೈಲ್ ಹ್ಯಾಂಡ್ಸೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಾದ ಶ್ರೀ ಶರತ್ಚಂದ್ರ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಮಾನ್ಯ ಶ್ರೀ ಕೆ. ಯಲ್ಲಪ್ಪ ರವರ ಆದೇಶದಂತೆ ಶ್ರೀ ಜೀನೆಂದ್ರ ಖನಗಾವಿ, ಡಿವೈ.ಎಸ್.ಪಿ. ಅರಸೀಕೆರೆ ಇವರ ಮಾರ್ಗದರ್ಶನದಲ್ಲಿ ಶ್ರೀ ಪರಶುರಾಮಪ್ಪ. ಹೆಚ್. ಪೊಲೀಸ್ ಇನ್ಸ್ಪಕ್ಟರ್ರವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ಗಳಾದ ನಾಗೇಂದ್ರ ಬಿ.ಎಲ್. ಪಿ.ಎಸ್.ಐ (ಕಾನೂನು ಸುವ್ಯವಸ್ಥೆ), ಎಸ್.ಕೆ. ಕುರಗೋಡಿ ಪಿ.ಎಸ್.ಐ (ಅಪರಾಧ ವಿಭಾಗ), ಸಿಬ್ಬಂದಿಗಳಾದ ಹೆಚ್.ಸಿ-೨೦೩, ಪಿ.ಸಿ-೬೧೦ ಗಿರೀಶ, ಪಿ.ಸಿ-೩೬೩ ಮಂಜೇಗೌಡ, ಪಿ.ಸಿ-೫೪೦ ರಾಜು, ಪಿ.ಸಿ-೧೨೧ ದೇವರಾಜು, ಹೆಚ್.ಡಿ. ಮೋಹನ್ ಜೀಪ್ ಚಾಲಕರು ಶ್ರಮಿಸಿರುತ್ತಾರೆ.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....