ಮಂಗಳವಾರ, ನವೆಂಬರ್ 29, 2016

ಡಿಜಿಟಲ್ ವ್ಯವಹಾರಕ್ಕೆ ನಾವೆಷ್ಟು ಸಿದ್ಧರಾಗಿದ್ದೀವಿ

ಡಿಜಿಟಲ್ ವ್ಯವಹಾರಕ್ಕೆ ನಾವೆಷ್ಟು ಸಿದ್ಧರಾಗಿದ್ದೀವಿ...


ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳೆಯ 500 ಮತ್ತು 1000 ರೂಪಾಯಿಗಳ ಚಲಾವಣೆಯಯನ್ನು ರದ್ದುಗೊಳಿಸಿದ್ದು ತಮಗೆಲ್ಲಾ ಗೊತ್ತೇ ಇದೆ.  ಮೊನ್ನೆ 27-11-2016, ಭಾನುವಾರದಂದು ಪ್ರಸಾರವಾದ ಪ್ರಧಾನ ಮಂತ್ರಿ ಮೋದಿರವರ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ತಮ್ಮ ವ್ಯಾಪಾರದಲ್ಲಿ  ಹಾಗೂ ಇತರೆ ಹಣಕಾಸಿನ ವ್ಯವಹಾರಗಳು ಡಿಜಿಟಲ್ ರೂಪದಲ್ಲಿ  (ಇಂಟರ್ ನೆಟ್ ಬ್ಯಾಂಕಿಗ್, ಮೊಬೈಲ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಕೆ, ಈ-ವ್ಯಾಲೆಟ್ ಇತ್ಯಾದಿಗಳ ಮೂಲಕ) ನಡೆಸುವಂತೆ ಸಲಹೆ ನೀಡಿದ್ದಾರೆ.  ಅಲ್ಲದೇ ದೇಶದ ಯುವ ಜನತೆಯು ತಮಗೆ ಪರಿಚಿತರಿರುವ ಹಿರಿಯರುಗಳಿಗೂ ಈ ಡಿಟಿಜಟ್ ಹಣ ಚಲಾವಣೆಯನ್ನು ಮಾಡುವ ರೀತಿಗಳನ್ನು ತಿಳಿಸಿಕೊಡಿ ಎಂದು ಕರೆ ನೀಡಿದ್ದಾರೆ. 

ಪ್ರಧಾನ ಮಂತ್ರಿಯವರ ಆಲೋಚನೆಯೇನೋ ಅತ್ಯುತ್ತಮವಾಗಿದೆ.  ಆದರೆ ನಮ್ಮ ಭಾರತ ದೇಶದಲ್ಲಿ ಈ ರೀತಿಯ ಡಿಜಿಟಲ್ ವಹಿವಾಟು ಎಷ್ಟರಮಟ್ಟಿಗೆ ಸುರಕ್ಷಿತವಾಗಿ ನಡೆಸಬಹುದು ಎಂಬುದನ್ನೂ ಗಮನಿಸಬೇಕಾಗುತ್ತದೆ. 

ಹಣಕಾಸಿನ ವ್ಯವಹಾರಗಳಲ್ಲಿ ಆನ್ ಲೈನ್ ಮೂಲಕ ಜನರನ್ನು ವಂಚಿಸುವ ಅತಿದೊಡ್ಡ ಜಾಲವೇ ಈ ಜಗತ್ತಿನಲ್ಲಿದೆ.  ಇವರು ಸಾರ್ವಜನಿಕರಿಗೆ ಕರೆ ಮಾಡಿ ಅವರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡಿನ ಮಾಹಿತಿಯನ್ನು ಪಡೆದು, ಅವರ ಖಾತೆಯಲ್ಲಿರುವ ಹಣವನ್ನು ಕ್ಷಣಮಾತ್ರದಲ್ಲಿ ಲಪಟಾಯಿಸುತ್ತಾರೆ. ಈ ಕೃತ್ಯ ಎಸಗುವುದರಲ್ಲಿ ನೈಜೀರಿಯನ್ ದೇಶದವರು ಕುಖ್ಯಾತಿ ಪಡೆದಿದ್ದಾರೆ. ಅದಕ್ಕಾಗಿ ಇಂತಹ ವಂಚನೆಯನ್ನು "ನೈಜೀರಿಯನ್ ಫ್ರಾಡ್" ಎಂದು ಕರೆಯುತ್ತಾರೆ.  ಈ ರೀತಿಯಾಗಿ ವಂಚನೆಗೊಳಗಾಗುವರು ಕೇವಲ ಅನಕ್ಷರಸ್ಥರೋ, ಡಿಜಿಟಲ್ ಜ್ಞಾನ ಇಲ್ಲದವರೋ ಮಾತ್ರ ಅಲ್ಲ, ಅತ್ಯಂತ ವಿದ್ಯಾವಂತರು, ಐ.ಟಿ ಇಂಜಿನಿಯರ್ ಗಳು, ಅಷ್ಟೇಕೆ  ನಮ್ಮ ಕರ್ನಾಟಕ ರಾಜ್ಯದ ಹಾಲಿ ಪೊಲೀಸ್ ಮಹಾನಿರ್ದೇಶಕರೂ ಕೂಡ ಈ ವಂಚಕರಿಂದ ಹಣ ಕಳೆದುಕೊಂಡಿದ್ದಾರೆ.  ಬಹಳಷ್ಟು ಸಂದರ್ಭದಲ್ಲಿ ಈ ವಂಚಕರನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿರುತ್ತದೆ. ಆನ್ ಲೈನ್ ನಲ್ಲಿ  ಒಮ್ಮೆ ಕಳೆದುಕೊಂಡ ಹಣ ಮತ್ತೆ ದೊರಕುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು.


ಸಾರ್ವಜನಿಕರಿಗೆ ಈರೀತಿಯ ಆನ್ ಲೈನ್ ವಂಚನೆಗಳ ಕುರಿತ ಮಾಹಿತಿಯನ್ನು ತಿಳಿದವರು ನೀಡಬೇಕು.  ಹಾಗೂ ಸರ್ಕಾರವು ಈ ರೀತಿಯ ವಂಚಕರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಬೇಕು. ಇವೆಲ್ಲದಕ್ಕೂ ಮೊದಲು ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ದೂರವಾಣಿ ಸೌಕರ್ಯ, ಮೊಬೈಲ್ ಸಿಗ್ನಲ್  ಹಾಗೂ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ಪ್ರತಿಯೊಂದು ಗ್ರಾಮಗಳಿಗೂ ಸಿಗುವಂತಾಗಬೇಕು.  ಆಗ ಮಾತ್ರ ಪ್ರಧಾನಿಯವರ ಕನಸಿನ ಕೂಸಾದ ಡಿಜಿಟಲ್ ಇಂಡಿಯಾ ಸಾಕಾರಗೊಳಿಸಬಹುದು.

ಶ್ರೀರಾಮ ಜಮದಗ್ನಿ
ಅರಸೀಕೆರೆ


Share:

ಭಾನುವಾರ, ನವೆಂಬರ್ 27, 2016

ರಾಜ್ಯಮಟ್ಟದ ಹಳ್ಳಿ ಗುಡ್ಡಗಾಡು ಓಟದ ಸ್ಪರ್ಧೆ

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ, ಹಾಸನ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಅರಸೀಕೆರೆ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಅರಸೀಕೆರೆಯಲ್ಲಿ ರಾಜ್ಯಮಟ್ಟದ ಹಳ್ಳಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ದಿನಾಂಕ 27-11-2016ನೇ ಭಾನುವಾರದಂದು ಬೆಳಿಗ್ಗೆ ಆಯೋಜಿಸಲಾಗಿತ್ತು. ರಾಜ್ಯದ ಅನೇಕ ಜಿಲ್ಲೆಗಳ ವಿವಿಧ ವಯೋಮಾನದ ಸುಮಾರು 600ಕ್ಕೂ ಅಧಿಕ ಸ್ಪರ್ಧಾಳುಗಳು, 12 ವಿಭಾಗಳಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.






Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....