ಕುಂದು-ಕೊರತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುಂದು-ಕೊರತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 26, 2017

ಅರಸೀಕೆರೆಯಲ್ಲಿ ಗಣೇಶನ ವಿಸರ್ಜನೆ ಹೀಗೆ ನಡೆಯುತ್ತಿದೆ

Arsikere


ಬರಪೀಡಿತ ಅರಸೀಕೆರೆ ತಾಲ್ಲೂಕಿನಲ್ಲಿ ಎಲ್ಲ ಕೆರೆ ಕಟ್ಟೆಗಳೂ ಖಾಲಿಯಾಗಿವೆ, ಈ ಸಂದರ್ಭದಲ್ಲಿ ಅರಸೀಕೆರೆ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮಾಡಲು ನೀರಿರುವ ಒಂದು ಜಾಗವಿಲ್ಲ.  ಹೀಗಾಗಿ ಕೆಲವರು ತಮ್ಮ ತಮ್ಮ ಮನೆಯಲ್ಲಿ ಬಕೇಟಿನಲ್ಲಿ ಗಣೇಶನನ್ನು ವಿಸರ್ಜಿಸುತ್ತಿದ್ದಾರೆ. ಇನ್ನು ಕೆಲವು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ವಿಶೇಷ ಕಾಳಜಿ ವಹಿಸಿ, ಅರಸೀಕೆರೆ ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರುಗಳ ನೇತೃತ್ವದಲ್ಲಿ ಪಟ್ಟಣದ ಕಂತೇನಹಳ್ಳಿ ದೊಡ್ಡಕೆರೆಯಲ್ಲಿ ಸುಮಾರು 15 ಅಡಿ ಆಳದ ಒಂದು ದೊಡ್ಡ ಹೊಂಡವನ್ನು ತುರ್ತಾಗಿ ನಿರ್ಮಿಸಿ ಅದಕ್ಕೆ ಬೋರ್ ವೆಲ್ ಮೂಲಕ ನೀರನ್ನು ಸರಬರಾಜು ಮಾಡಿ ಸಾರ್ವಜನಿಕರಿಗೆ ಗಣೇಶ ವಿಸರ್ಜನೆಗೆ ಅವಕಾಶ ಮಾಡಿದ್ದಾರೆ. 


ಈ ಬರಗಾಲ ಹೀಗೆ ಮುಂದುವರಿದರೆ, ಮುಂದೆ ಗಣೇಶ ವಿಸರ್ಜನೆಗೆ ಬೋರ್ ವೆಲ್ ನೀರೂ ಕೂಡ ದೊರಕುವುದು ಕಷ್ಟವಾಗುತ್ತದೆ.  ಆಗ ಗುಂಡಿತೋಡಿ ಗಣೇಶನನ್ನು ಮಣ್ಣಿನಿಂದ ಮುಚ್ಚಬೇಕಾಗಬಹುದು.  ದೈವ ಕೃಪೆಯಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸಬಹುದು. 


Share:

ಬುಧವಾರ, ಆಗಸ್ಟ್ 9, 2017

ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

Arsikere


ಶಾಲಾ ಕಾಲೇಜು ವ್ಯಾಸಂಗಕ್ಕೆ ಬೇರೆ ಬೇರೆ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಕೆಲ ಬಸ್ಸಿನಲ್ಲಿ ಹತ್ತಲು ಅವಕಾಶ ನೀಡುತ್ತಿಲ್ಲವಾದ್ದರಿಂದ, ಮತ್ತು ಶಾಲಾ ಕಾಲೇಜು ಪ್ರಾರಂಭದ ಸಮಯಕ್ಕೆ ತಲುಪುವಂತೆ ಬಸ್ಸುಗಳ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಆಗ್ರಹಿಸಿ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಸಿದರು.  ಇದರಿಂದಾಗಿ ಪಟ್ಟಣದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ಸಾರಿಗೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಅರಸೀಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಕಿಲೋಮೀಟರ್ ವರೆಗೂ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.


ಚಿತ್ರ ಮಾಹಿತಿ : ಪೋಲೀಸ್ ಇಲಾಖೆ



Share:

ಶನಿವಾರ, ಆಗಸ್ಟ್ 5, 2017

ಕಾಟಾಚಾರಕ್ಕಿರುವ ಅರಸೀಕೆರೆ ನಗರಸಭೆ ವೆಬ್ ಸೈಟ್

Arsikere


ಅರಸೀಕೆರೆ ನಗರಸಭೆಯ ಅಧಿಕೃತ ವೆಬ್ ಸೈಟ್ http://www.arasikerecity.mrc.gov.in/kn/Home ಗೆ ತಾವು ಭೇಟಿ ಕೊಟ್ಟರೆ ಒಂದರ ಮೇಲೆ ಒಂದು ಅಚ್ಚರಿಯ ಮಾಹಿತಿ ದೊರೆಯುತ್ತದೆ.  ಹೆಸರಿಗೆ ಅರಸೀಕೆರೆ ನಗರಸಭೆ ಎಂದಿದೆ, ಆದರೆ ಈ ವೆಬ್ ಸೈಟಿನ ಕನ್ನಡ ಆವೃತ್ತಿಯ ಮುಖಪುಟದಲ್ಲಿ ಮಂಡ್ಯದ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಳಾಸ ಕೂಡ ಮಂಡ್ಯದ ವಿಳಾಸ ಇದೆ. ಹುಡುಕುತ್ತ ಹೋದರೆ ಬರೀ ಅಧ್ವಾನಗಳೇ ಕಾಣುತ್ತವೆ. ವೆಬ್ ಸೈಟಿನ ಇಂಗ್ಲೀಷ್ ಆವೃತ್ತಿಯೂ ಕೂಡ ಹೇಳಿಸಿಕೊಳ್ಳುವಂತಿಲ್ಲ. ಬಹುಶಃ ಈ ವೆಬ್ ಸೈಟನ್ನು ಕಾಟಾಚಾರಕ್ಕೆ ನಿರ್ಮಿಸಿದಂತಿದೆ.


ಅರಸೀಕೆರೆ ನಗರಸಭೆಯ 27 ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ.  ದಯವಿಟ್ಟು ನಗರಸಭೆಯ ಅಧಿಕೃತ ವೆಬ್ ಸೈಟಿನಲ್ಲಿ ಸರಿಯಾದ ಮಾಹಿತಿಗಳು ದೊರಕುವಂತೆ ಐಟಿ ವಿಭಾಗದ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ


Share:

ಬುಧವಾರ, ಆಗಸ್ಟ್ 2, 2017

ವಾಹನ ಚಾಲಕರಿಗೆ ಅಪಾಯಕಾರಿಯಾಗಿರುವ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆ

Arsikere


ಅರಸೀಕೆರೆ ಪಟ್ಟಣದ ರೀಡಿಂಗ್ ರೂಂ ರಸ್ತೆಗೆ ಇತ್ತೀಚೆಗೆ ಸಿಮೆಂಟ್ ಕಾಂಕ್ರೀಟ್ ಹಾಕಿ ಮರು ನಿರ್ಮಾಣ ಮಾಡಲಾಯಿತು.  ಸುಮಾರು ಒಂದು ಅಡಿ ದಪ್ಪದಷ್ಟು ಸಿಮೆಂಟ್ ಕಾಂಕ್ರೀಟ್ ಹಾಕಿ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.  ಆದರೆ ಈ ರಸ್ತೆ ನಿರ್ಮಾಣವು ಅತ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.  ರಸ್ತೆಯ ಬದಿಗೆ ಯಾವುದೇ ರೀತಿಯ ಪ್ಯಾಕಿಂಗ್ ನೀಡದೇ ಇರುವುದರಿಂದ, ವಾಹನ ಚಾಲನೆ ಮಾಡುವಾಗ ಅಪ್ಪಿತಪ್ಪಿ ರಸ್ತೆಯ ಬದಿಗೆ ವಾಹನ ತಂದರೆ ಅಪಘಾತ ಶತಸಿದ್ಧ.

ಇಂದು (ಬುಧವಾರ) ಇದೇ ರಸ್ತೆಯ ವೆಂಕಟೇಶ್ವರ ಕಲಾಭವನದ ಮುಂಭಾಗದಲ್ಲಿರುವ ತಿರುವಿನಲ್ಲಿ ಎರಡು ಕಾರುಗಳು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕಿಳಿದವು.  ಸುತ್ತಮುತ್ತಲಿನ ಜನರ ಸಹಕಾರದಿಂದ ಕಾರನ್ನು ಮೇಲೆತ್ತಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅರಸೀಕೆರೆ ನಗರಸಭೆಯವರು ಈ ಬಗ್ಗೆ ಸೂಕ್ತ ಗಮನ ಹರಿಸಿ, ರಸ್ತೆಯ ಎರಡೂ ಬದಿಗಳಿಗೆ ಮಣ್ಣು ಅಥವಾ ಗ್ರಾವೆಲ್ ಪ್ಯಾಕಿಂಗ್ ನೀಡಿ, ವಾಹನ ಚಾಲಕರ ಸುರಕ್ಷತೆಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹ




Share:

ಸೋಮವಾರ, ಜುಲೈ 10, 2017

ರಸ್ತೆಯಲ್ಲಿ ಹರಿಯುತ್ತಿದೆ ಅರಸೀಕೆರೆ ಸರ್ಕಾರಿ ಜೆ.ಸಿ.ಆಸ್ಪತ್ರೆಯ ತ್ಯಾಜ್ಯ

Arsikere


ಅರಸೀಕೆರೆ ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯ ತ್ಯಾಜ್ಯದ ಗುಂಡಿಯು (Septic Tank) ಸಂಪೂರ್ಣ ಭರ್ತಿಯಾಗಿ, ರಸ್ತೆಯ ಮೇಲೆ ಉಕ್ಕಿ ಹರಿಯುತ್ತಿದ್ದು, ಶಿವಾನಂದ ಕಾಲೋನಿಯ ಜನತೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಾದ್ಯಂತ ಡೆಂಗ್ಯೂ, ವೈರಲ್ ಜ್ವರದ ಹಾವಳಿ ಇದೆ, ಈ ನಡುವೆ ಆಸ್ಪತ್ರೆಯ ತ್ಯಾಜ್ಯಗಳು ರಸ್ತೆಯಲ್ಲಿ ನಿಂತು ಅದರಲ್ಲಿ ಕುಳಿತ ಸೊಳ್ಳೆ, ನೊಣಗಳ ಮೂಲಕ ಜನಸಾಮಾನ್ಯರ ಆರೋಗ್ಯಕ್ಕೆ ಮತ್ತಷ್ಟು ತೊಂದರೆ ಉಂಟಾಗುವ ಭೀತಿ ಎದುರಾಗಿದೆ.  ಸರ್ಕಾರಿ ಜೆ.ಸಿ.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಈ ಕುರಿತು ಶೀಘ್ರ ಗಮನಹರಿಸಿ, ತ್ಯಾಜ್ಯದ ಗುಂಡಿಯನ್ನು ದುರಸ್ತಿಮಾಡಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಶಿವಾನಂದ ಕಾಲೋನಿಯ ನಿವಾಸಿಗಳು ಆಗ್ರಹಿಸಿದ್ದಾರೆ.




Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....