ಪರಿಸರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪರಿಸರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ನವೆಂಬರ್ 16, 2017

ಅರಸೀಕೆರೆಯಲ್ಲಿ ಮುಂಜಾನೆಯ ಮಂಜು



ಅರಸೀಕೆರೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ದಟ್ಟವಾದ ಮಂಜು ಕವಿದು ನೋಡಲು ಮಲೆನಾಡಿನಂತೆ ಕಾಣುತ್ತಿತ್ತು.  ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮಂಜು ನೋಡನೋಡುತ್ತಿದ್ದಂತೆ ದಟ್ಟವಾಗತೊಡಗಿತು.   8 ಗಂಟೆಯ ಹೊತ್ತಿಗೆ ಮಂಜು ಸಂಪೂರ್ಣ ಕರಗಿಹೋಯಿತು.







Share:

ಶುಕ್ರವಾರ, ಸೆಪ್ಟೆಂಬರ್ 1, 2017

ಅರಸೀಕೆರೆ ನಗರಸಭೆಗೆ ಪ್ರಶಸ್ತಿಯ ಗರಿ

Arsikere


ರಾಜ್ಯದ ಒಟ್ಟು 57 ನಗರಸಭೆಗಳ (CMC) ಪೈಕಿ ಅರಸೀಕೆರೆ ಪಟ್ಟಣದ ನಗರಸಭೆಗೆ “ಬಯಲು ಶೌಚ ಮುಕ್ತ ನಗರ” ಎಂಬ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿದೆ.  ನೆನ್ನೆ 31-08-2017 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿಪತ್ರವನ್ನು ನೀಡಿದರು.  ಅರಸೀಕೆರೆ ನಗರಸಭೆಯ ಉಪಾಧ್ಯಕ್ಷರಾದ ಪಾರ್ಥಸಾರಥಿ ಮತ್ತು ಆಯುಕ್ತರಾದ ಪರಮೇಶ್ ರವರು ಮುಖ್ಯಮಂತ್ರಿಗಳಿಂದ ಪ್ರಶಸ್ತಿಪತ್ರ ಸ್ವೀಕರಿಸಿದರು.




Share:

ಗುರುವಾರ, ಜೂನ್ 15, 2017

ನೀರಿಗಾಗಿ ಅರಣ್ಯ - ಬೀಜ ಪ್ರಸರಣ ಕಾರ್ಯಕ್ರಮ

Arsikere


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ನಾಳೆ (ದಿನಾಂಕ 16-06-2017, ಶುಕ್ರವಾರದಂದು) ಬೆಳಿಗ್ಗೆ 9 ಗಂಟೆಗೆ, ಅರಸೀಕೆರೆ ತಾಲ್ಲೂಕು ರಾಮೇನಹಳ್ಳಿಯ ಒಬಲಾಯನ ಕೆರೆ ಆವರಣದಲ್ಲಿ  ಬೆಂಗಳೂರಿನ ನೇಯೋಟ್ ಸಂಸ್ಥೆ ಹಾಗೂ ಅರಸೀಕೆರೆ ತಾಲ್ಲೂಕು ಅರಣ್ಯ ಇಲಾಖೆಯ ಸಹಯೋಗದಲ್ಲಿ  ಜಲ ಸಂರಕ್ಷಣೆಗಾಗಿ ಬೀಜ ಪ್ರಸರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಜಿ.ವಿ. ಆನಂದ ಮೂರ್ತಿ, ಕಥೆಗಾರರು ತುಮಕೂರು ಇವರು ನೆರವೇರಿಸಲಿದ್ದಾರೆ.  ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಎಂ.ಎಲ್.ಮಂಜುನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಚನ್ನರಾಯಪಟ್ಟಣ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ.ಡಿ. ತಮ್ಮಯ್ಯನವರು, ಸಾಮಾಜಿಕ ಅರಣ್ಯ ಉಪವಿಭಾಗ ಅರಸೀಕೆರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ವಿಲಿಯಂ ಪ್ರಾನ್ಸಿಸ್ ಹಾಗೂ ಅರಸೀಕೆರೆ ಪಟ್ಟಣದ ಆಫೀಸರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ. ಎನ್.ವೆಂಕಟೇಶ್ ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


Share:

ಸೋಮವಾರ, ಜೂನ್ 5, 2017

ಅರಸೀಕೆರೆಯ ವೃಕ್ಷಮಿತ್ರ : ಶ್ರೀ. ಕೆ.ಮಂಜುನಾಥ್

Arsikere

ಇಂದು ವಿಶ್ವ ಪರಿಸರ ದಿನಾಚರಣೆ, ಇದರ ನಿಮಿತ್ತ ಜಗತ್ತಿನಾದ್ಯಂತ ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ಕೆಲವು ವ್ಯಕ್ತಿಗಳು ಇಂದು ಒಂದೋ ಎರಡೋ ಗಿಡ ನೆಟ್ಟು ಫೋಟೋ ತೆಗೆಸಿಕೊಂಡು ಫೇಸ್ ಬುಕ್, ವ್ಯಾಟ್ಸಪ್ ಗಳಲ್ಲಿ ಶೇರ್ ಮಾಡಿಕೊಂಡು ಕೇವಲ ಪ್ರಚಾರ ಪಡೆಯಲು ಹಾತೊರೆಯುತ್ತಾರೆ. ನಾಳೆಯಿಂದ ಅವರು ನೆಟ್ಟ ಗಿಡಕ್ಕೆ ಒಂದು ಬೊಗಸೆ ನೀರನ್ನೂ ಹಾಕದೇ ಜಾಣ ಮರೆವು ತೋರುತ್ತಾರೆ.  ಆದರೆ ಇನ್ನು ಕೆಲವು ವ್ಯಕ್ತಿಗಳು ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರದ ಹಂಗಿಲ್ಲದೆ ಪರಿಸರ ಸಂರಕ್ಷಣೆ ಹಾಗೂ ಗಿಡಮರ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಅರಸೀಕೆರೆ ಪಟ್ಟಣದಲ್ಲೂ ಎಲೆಮರೆ ಕಾಯಂತೆ, ಪರಿಸರ ಸಂರಕ್ಷಣೆಯನ್ನು ಮಾಡುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ.  ಅವರೇ ಶ್ರೀ. ಕೆ.ಮಂಜುನಾಥ್, ಪಟ್ಟಣದ ಮಾರುತಿ ನಗರದ ನಿವಾಸಿಯಾಗಿರುವ ಮಂಜುನಾಥ್ ರವರು ಕಳೆದ ಐದಾರು ತಿಂಗಳಿಂದ ಕಂತೇನಹಳ್ಳಿ ಕೆರೆ ಪಾರ್ಕಿನ ನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಾಸಕ ಕೆ.ಎಂ.ಶಿವಲಿಂಗೇಗೌಡರ ಪ್ರಯತ್ನದ ಫಲವಾಗಿ ಕೆಲ ವರ್ಷಗಳ ಹಿಂದೆ ಅರಸೀಕೆರೆ ಕಂತೇನಹಳ್ಳಿ ಕೆರೆಯ ಬದಿಯಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡಲಾಯಿತು.  ಆದರೆ ಸೂಕ್ತ ನಿರ್ವಹಣೆ ಇಲ್ಲದೇ ಪಾರ್ಕಿನಲ್ಲಿ ಪುಂಡ ಪೋಕರಿಗಳು ಇಸ್ಪೀಟ್, ಮದ್ಯಪಾನ ಇತ್ಯಾದಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರು.  ವಾಯುವಿಹಾರಕ್ಕಾಗಿ ಬರುವ ಸಾರ್ವಜನಿಕರುಗಳಿಗೆ ಇದರಿಂದ ಕಿರಿಕಿರಿಯಾಗುತ್ತಿದ್ದರೂ, ಸಹಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿತ್ತು.  ಪಾರ್ಕಿನ ಗಿಡ ಮರಗಳಿಗೆ ಸೂಕ್ತ ನಿರ್ವಹಣೆ ಇಲ್ಲದೇ ಕೆಲವು ಗಿಡಗಳು ಒಣಗಿಹೋಗಿದ್ದವು, ಪಾರ್ಥೇನಿಯಂ, ಲಾಂಟಾನ, ಬಳ್ಳಾರಿ ಜಾಲಿ ಗಿಡಗಳು ಎಲ್ಲಂದರಲ್ಲಿ ಬೆಳೆದು ಪಾರ್ಕಿನ ಗುಣಮಟ್ಟವನ್ನೇ ಹಾಳುಮಾಡಿತ್ತು.   ಇಂತಹ ಸಂದರ್ಭದಲ್ಲಿ ಅರಸೀಕೆರೆ ನಗರಸಭೆ ಆಡಳಿತಕ್ಕೆ ಒಳಪಟ್ಟಿರುವ, ಕಂತೇನಹಳ್ಳಿ ಪಾರ್ಕಿನ ಉಸ್ತುವಾರಿಯ ಹೊಣೆ ಹೊತ್ತ ಮಂಜುನಾಥ್ ರವರು, ತಮ್ಮ ಸಹಾಯಕರುಗಳಾದ ಶಿವಶಂಕರಪ್ಪ, ಪಾಪಣ್ಣ, ಮಲ್ಲಿಕಾರ್ಜುನ ಮತ್ತು ಲೋಕೇಶ್ ರವರುಗಳ ಜೊತೆ ಪ್ರತಿನಿತ್ಯ ಪಾರ್ಕಿನ ನಿರ್ವಹಣೆಯನ್ನು ಪ್ರಾರಂಭಿಸಿದರು.  ಮೊದಲಿಗೆ ಪಾರ್ಕಿನಲ್ಲಿರುವ ಸುಮಾರು 2 ಕಿ.ಮೀ ಉದ್ದದ ವಾಕಿಂಗ್ ಪಾಥ್ ನ ಎರಡೂ ಬದಿಗಳಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತುಹಾಕಿದರು. ಪಾರ್ಕಿನಲ್ಲಿ ಲಭ್ಯವಿದ್ದ ಸಲಕರಣೆಗಳ ಸಹಾಯದಿಂದ, ನಿರ್ವಹಣೆ ಇಲ್ಲದೇ ಸೊರಗಿದ್ದ ಗಿಡಗಳ ಪೋಷಣೆ ಪ್ರಾರಂಭಿಸಿದರು.  ದಿನದಿನ ಕಳೆದಂತೆ, ಪಾರ್ಕಿಗೆ ಕಳೆ ಬರುವಂತಾಯಿತು.

ಕಳೆದ ಒಂದು ವಾರದಲ್ಲಿ, ಕೆರೆ ಪಾರ್ಕಿನ ಆವರಣದಲ್ಲಿ ವಿವಿಧ ಜಾತಿಯ ಸುಮಾರು 700 ಗಿಡಗಳನ್ನು ನೆಡಲಾಗಿದೆ, ಹಾಗೂ ಮುಂಬರುವ ದಿನಗಳಲ್ಲಿ ಪಾರ್ಕಿನಲ್ಲಿ ಇನ್ನೂ 500 ಗಿಡಗಳನ್ನು ನೆಡುವ ಗುರಿಯನ್ನು ಮಂಜುನಾಥ್ ರವರು ಹೊಂದಿದ್ದಾರೆ.  ಇವರಿಂದಾಗಿ, ಪಾರ್ಕಿನಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು ನಿಂತುಹೋಗಿವೆ.  ಇದೀಗ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಪಾರ್ಕಿನಲ್ಲಿ ಬೀಟ್ ನಡೆಸುತ್ತಿದ್ದು, ಪಾರ್ಕಿನಲ್ಲಿ ಯಾವುದೇ ಪುಂಡ ಪೋಕರಿಗಳು ಸುಳಿಯದಂತಾಗಿರುವುದರಿಂದ, ವಾಯು ವಿಹಾರಿಗಳು ಅತ್ಯಂತ ಸಂತಸಗೊಂಡಿದ್ದಾರೆ.

ಪಾರ್ಕಿನಲ್ಲಿ, ಸಂಜೆಯ ವೇಳೆಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಇದ್ದರೂ, ಈಗ ಅವುಗಳಲ್ಲಿ ಕೆಲವು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.  ಈ ಕುರಿತು ನಗರಸಭೆಯ ಅಧಿಕಾರಿಗಳು ಗಮನ ಹರಿಸಿ, ಪಾರ್ಕಿನ ಎಲ್ಲ ದೀಪಗಳನ್ನು ದುರಸ್ತಿ ಮಾಡಿಸಿದರೆ ಪಾರ್ಕಿಗೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಾಗೂ ಈಗ ನೆಟ್ಟಿರುವ ಗಿಡಗಳಿಗೆ ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆ ಕಲ್ಪಿಸಿದರೆ ಗಿಡಗಳಿಗೂ ಅನುಕೂಲವಾಗಲಿದೆ.

ವಿಶ್ವ ಪರಿಸರ ದಿನಾಚರಣೆಯ ಈ ದಿನದಂದು, ಅರಸೀಕೆರೆ ಕಂತೇನಹಳ್ಳಿ ಕೆರೆ ಪಾರ್ಕಿನ ಎಲ್ಲ ವಾಯುವಿಹಾರಿಗಳ ಪರವಾಗಿ ಶ್ರೀ.ಕೆ.ಮಂಜುನಾಥ್ ಮತ್ತು ತಂಡದವರಿಗೆ ಅಭಿನಂದನೆಗಳು.


ಅರಸೀಕೆರೆಯ ವೃಕ್ಷಮಿತ್ರ : ಶ್ರೀ. ಕೆ.ಮಂಜುನಾಥ್

ಅರಸೀಕೆರೆ ನಗರ ಠಾಣೆ ಪೊಲೀಸರು ಪಾರ್ಕಿನಲ್ಲಿ ಬೀಟ್ ನಡೆಸುತ್ತಿರುವುದು

ಹೊಸ ಗಿಡಗಳು

Share:

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

Arsikere


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ಅರಸೀಕೆರೆ ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ನಗರಸಭೆ ವತಿಯಿಂದ ಪರಿಸರ ಜಾಗೃತಿಯನ್ನು ಮೂಡಿಸಲು ಮನೆಮನೆ ಅಭಿಯಾನ ಆಯೋಜಿಸಲಾಗಿತ್ತು.  ಪೌರ ಕಾರ್ಮಿಕರುಗಳು ಪ್ರತಿ ಮನೆಗೆ ತೆರೆಳಿ, ತ್ಯಾಜ್ಯ ಕಸ ವಿಂಗಡನೆ ಮಾಡುವ ಕರಪತ್ರಗಳನ್ನು ವಿತರಿಸಿ, ಕಸವನ್ನು ಎಲ್ಲೆಂದರಲ್ಲಿ ಹಾಕದೇ, ಮನೆಮುಂದೆ ಬರುವ ತ್ಯಾಜ್ಯ ಸಂಗ್ರಹಣಾ ಆಟೋಗೆ ನೀಡಿ ಅರಸೀಕೆರೆಯನ್ನು ಮಾಲಿನ್ಯ ಮುಕ್ತ ನಗರವನ್ನಾಗಿಸುವಂತೆ ಸಾರ್ವಜನಿಕರುಗಳಿಗೆ ಮನವಿ ಮಾಡಿಕೊಂಡರು.


ಅರಸೀಕೆರೆ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗಿ, ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಸೀಕೆರೆ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ


Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....