ಗುರುವಾರ, ಏಪ್ರಿಲ್ 6, 2017

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ ರಥೋತ್ಸವ

ಹಾರನಹಳ್ಳಿ ಗ್ರಾಮದೇವತೆ ಕೋಡಮ್ಮದೇವಿಯವರ ರಥೋತ್ಸವ ಇಂದು(ಗುರುವಾರ) ವೈಭವದಿಂದ ನಡೆಯಿತು. ಕೋಡಮ್ಮದೇವಿ ಮೂಲ ಸನ್ನಿಧಾನದಲ್ಲಿ ಶ್ರೀ ದೇವಿಯವರಿಗೆ ಜಾತ್ರಾ ಪ್ರಯುಕ್ತ ವಿಶೇಷ ಪೂಜೆ ಅಲಂಕಾರವನ್ನು ಏರ್ಪಡಿಸಲಾಗಿತ್ತು. ಯಳವಾರೆ ಹುಚ್ಚಮ್ಮದೇವಿ, ಕೋಡಮ್ಮದೇವಿ, ಧೂತರಾಯಸ್ವಾಮಿ, ವೀರಭದ್ರಸ್ವಾಮಿ ಉತ್ಸವವು ಕೋಡಿಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಜಾತ್ರಾ ಆವರಣದಲ್ಲಿ ಸಿಡಿಸೇವೆ ಯಲ್ಲಿ ನೂರಾರು ಮಹಿಳೆಯರು ಮಕ್ಕಳು ಸಿಡಿ  ಕಂಬಸುತ್ತಿ ಪ್ರಾರ್ಥಿಸಿದರು   ಉಯ್ಯಾಲೆಸೇವೆ ಧೂತರಾಯಸ್ವಾಮಿಯವರ ಕತ್ತಿಸೇವೆ ನೆರವೇರಿತು. ಕೋಡಮ್ಮದೇವಿ ಹಾಗೂ ಹುಚ್ಚಮ್ಮದೇವಿಯವರನ್ನು ರಥದಲ್ಲಿ ಕುಳ್ಳರಿಸಿ ಬಲಿಪ್ರಧಾನ ಪುಣ್ಯಾಹಃದ ನಂತರ ಚಲುವರಾಯಸ್ವಾಮಿ ವೀರಭದ್ರದೇವರು ಧೂತರಾಯಸ್ವಾಮಿ ರಥಕ್ಕೆ ಕಾಯಿ ಹೊಡೆದ ನಂತರ ಹಾರನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ರಥಕ್ಕೆ ಕಾಯಿ ಹೊಡೆದು ರಥ ಎಳೆದರು.

ನೆರೆದಿದ್ದ ಸಹಸ್ರಾರು ಭಕ್ತಾಧಿಗಳು ರಥಕ್ಕೆ ಬಾಳೆಹಣ್ಣು ಎಸೆಯುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು.  ಗ್ರಾಮಲೆಕ್ಕಿಗರಾದ ಯದುಕುಮಾರ್ ಲೋಕಶಿಕ್ಷಣ ಟ್ರಸ್ಟ್, ಕಾರ್ಯದರ್ಶಿಹೆಚ್.ಎಸ್. ನಾರಯಣಮಾರ್ತಿ,ಗ್ರಾಪಂ ಸದಸ್ಯರುಗಳು ಚಂದ್ರಶೇಖರ್, ದೇವಾಲಯ ಸಮಿತಿ ಅಧ್ಯಕ್ಷರು ಸದಸ್ಯರುಗಳು ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ರಥಕ್ಕೆ ಹಾಗೂ ದೇವಾಲಯಕ್ಕೆ ವಿವಿಧ ಹೂಗಳಿಂದ ಶೃಂಗಾರಗೊಳಿಸಲಾಗಿತ್ತು. ಕೋಡಮ್ಮದೇವಿ ಸಮುದಾಯ ಭವನವತಿ ಸಮಿತಿ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

(ಚಿತ್ರ-ಮಾಹಿತಿ : ಚಿನ್ಮಯ್ ಹಾರನಹಳ್ಳಿ)

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ  ರಥೋತ್ಸವ 

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ  ರಥೋತ್ಸವ 

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ 

ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ  ರಥೋತ್ಸವ 

Share:

ಬುಧವಾರ, ಏಪ್ರಿಲ್ 5, 2017

ಅರಸೀಕೆರೆಯಲ್ಲಿ ಶ್ರೀರಾಮ ನವಮಿ

ಅರಸೀಕೆರೆ ಪಟ್ಟಣದಲ್ಲಿಂದು ಸಂಭ್ರಮ ಸಡಗರದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.  ಅರಸೀಕೆರೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು.  ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಸೀತಾರಾಮ ಮಂದಿರಲ್ಲಿ ಶ್ರೀಯವರಿಗೆ ವಿಶೇಷ ಅಲಂಕಾರ, ವಸಂತ ಸೇವೆ ಜರುಗಿತು. ಸಾಯಂಕಾಲ ಪುಷ್ಪಾಲಂಕೃತ ಮಂಟಪದಲ್ಲಿ ಶ್ರೀಸೀತಾರಾಮರ ಮೆರವಣಿಗೆ ಜರುಗಿತು.

 ಅರಸೀಕೆರೆ ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀ ಸೀತಾರಾಮ ಮಂದಿರಲ್ಲಿ ಶ್ರೀಯವರಿಗೆ ವಿಶೇಷ ಅಲಂಕಾರ

ಅರಸೀಕೆರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪುಷ್ಪಾಲಂಕೃತ ಮಂಟಪದಲ್ಲಿ ಶ್ರೀಸೀತಾರಾಮರ ಮೆರವಣಿಗೆ

ಅರಸೀಕೆರೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು

Share:

ಸೋಮವಾರ, ಏಪ್ರಿಲ್ 3, 2017

ಅರಸೀಕೆರೆ ತಾಲ್ಲೂಕಿನ ಹಲವು ಟೆಲಿಪೋನ್ ಎಕ್ಸ್‌ಚೇಂಜ್ ನಿಷ್ಕ್ರಿಯ

ಓ.ಎಫ್.ಸಿ ಕೇಬಲ್ ತುಂಡಾಗಿ ಅರಸೀಕೆರೆ ತಾಲ್ಲೂಕಿನ ಹಲವು ಟೆಲಿಪೋನ್ ಎಕ್ಸ್‌ಚೇಂಜ್ ನಿಷ್ಕ್ರಿಯ


ಅರಸೀಕೆರೆ ಪಟ್ಟಣದ ಹುಳಿಯಾರ್ ರಸ್ತೆ ಶಿವಾಲಯದ ಮುಂಭಾಗದಲ್ಲಿ ಇಂದು ಬೆಳಿಗ್ಗೆ ರಸ್ತೆಕಾಮಗಾರಿ ಮಾಡುವ ಸಮಯದಲ್ಲಿ ಜೆಸಿಬಿ ಯಂತ್ರದ ಚಾಲಕರ ಅಜಾಗರೂಕತೆಯಿಂದಾಗಿ ಅರಸೀಕೆರೆ ದೂರವಾಣಿ ಕೇಂದ್ರದ ಪ್ರಮುಖ ಓ.ಎಫ್.ಸಿ ಕೇಬಲ್ ತುಂಡಾಗಿದ್ದು, ತಾಲ್ಲೂಕಿನ ದುಮ್ಮೇನಹಳ್ಳಿ, ಜೆ.ಸಿ.ಪುರ, ದೊಡ್ಡಮೇಟಿಕುರ್ಕೆ, ಮದ್ದರಹಳ್ಳಿ, ಕಣಕಟ್ಟೆ, ಕಲ್ಕುಂಡಿ ಗ್ರಾಮಗಳ ದೂರವಾಣಿ ವಿನಿಮಯ ಕೇಂದ್ರಗಳು ಸಂಪರ್ಕ ಕಳೆದುಕೊಂಡಿವೆ.  ಇದರಿಂದಾಗಿ ಈ ದೂರವಾಣಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ನೂರಾರು ಬಿ.ಎಸ್.ಎನ್.ಎಲ್ ಫೋನ್ ಗಳು ನಿಷ್ಕ್ರಿಯವಾಗಿ ಸಾರ್ವಜನಿಕರಿಗೆ ತೀವ್ರವಾದ ತೊಂದರೆಯುಂಟಾಗಿದೆ.   ಕಾಮಗಾರಿಯ ಮೊದಲೇ ಬಿ.ಎಸ್.ಎನ್.ಎಲ್ ಅಧಿಕಾರಿಗಳಿ ವಿಷಯ ತಿಳಿಸಿದ್ದರೆ, ಆ ಜಾಗದಲ್ಲಿ ಓ.ಎಫ್.ಸಿ ಕೇಬಲ್ ಹಾದುಹೋಗಿರುವ ಜಾಗಗಳನ್ನು ಚಾಲಕರಿಗೆ ತೋರಿಸುತ್ತಿದ್ದರು. ಆದರೆ ಬಿ.ಎಸ್.ಎನ್.ಎಲ್ ಅಧಿಕಾರಿಗಳ ಗಮನಕ್ಕೆ ತಿಳಿಸದೇ ಜೆಸಿಬಿ ಯಂತ್ರದಲ್ಲಿ ರಸ್ತೆಯನ್ನು ಅಗೆದದ್ದು ಈ ಸಮಸ್ಯೆಗೆ ಕಾರಣವಾಗಿದೆ.  ಜೆಸಿಬಿ ಯಂತ್ರದ ಚಾಲಕರಿಗೆ ಎಲ್ಲೆಲ್ಲಿ ಓ.ಎಫ್.ಸಿ ಕೇಬಲ್ ಹಾದುಹೋಗಿದೆ ಎಂದು ತಿಳಿಯದೇ ರಸ್ತೆಯನ್ನು ಅಗೆದಿದ್ದರಿಂದ, ಭೂಮಿಯೊಳಗಿದ್ದ ಓ.ಎಫ್.ಸಿ ಕೇಬಲ್ ತುಂಡುತುಂಡಾಗಿ ಹಲವು ದೂರವಾಣಿ ವಿನಿಮಯ ಕೇಂದ್ರಗಳು ಹಾಗೂ ಸಂಪರ್ಕಗಳು ನಿಷ್ಕ್ರಿಯವಾಗಿವೆ.  ಇದನ್ನು ಸರಿಪಡಿಸಲು ಕನಿಷ್ಟ ಮೂರು ದಿನಗಳು ಬೇಕಾಗಬಹುದು ಎಂದು ಬಿ.ಎಸ್.ಎನ್.ಎಲ್ ಸಿಬ್ಬಂದಿಗಳು ತಿಳಿಸಿದ್ದಾರೆ.

(ಚಿತ್ರಕೃಪೆ : ಬಿ.ಎಸ್.ಎನ್.ಎಲ್ ಅರಸೀಕೆರೆ)

ಅರಸೀಕೆರೆ ಹುಳಿಯಾರ್ ರಸ್ತೆಯಲ್ಲಿ ತುಂಡಾಗಿರುವ ಬಿ.ಎಸ್.ಎನ್.ಎಲ್ ಒ.ಎಫ್.ಸಿ ಕೇಬಲ್

ಅರಸೀಕೆರೆ ಹುಳಿಯಾರ್ ರಸ್ತೆಯಲ್ಲಿ ತುಂಡಾಗಿರುವ ಬಿ.ಎಸ್.ಎನ್.ಎಲ್ ಒ.ಎಫ್.ಸಿ ಕೇಬಲ್

Share:

ಭಾನುವಾರ, ಏಪ್ರಿಲ್ 2, 2017

ಪಲ್ಸ್ ಪೋಲಿಯೋ ಲಸಿಕೆ

ಅರಸೀಕೆರೆ :  ಇಂದು ದೇಶದಾದ್ಯಂತ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದೆ.  ಏಪ್ರಿಲ್ 30 ರಂದು ಎರಡನೇ ಹಂತದ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಅರಸೀಕೆರೆ ಪಟ್ಟಣದಲ್ಲಿ 20 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅರಸೀಕೆರೆ ತಾಲ್ಲೂಕಿನಾದ್ಯಂತ ಒಟ್ಟು 149 ಪಲ್ಸ್ ಪೋಲಿಯೋ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ಪೊಲೀಯೊ ರೋಗವು ಚಿಕ್ಕ ಮಕ್ಕಳಲ್ಲಿ ಕಂಡುಬರುತ್ತದೆ. ಮತ್ತು ಈ ರೋಗವು ಸಾಂಕ್ರಾಮಿಕ ರೋಗ ಆಗಿದ್ದು, ಒಂದು ಮಕ್ಕಳಿಂದ ಮತ್ತೊಂದು ಮಗುವಿಗೆ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು.  ಈ ಮುಂಚೆ ಎಷ್ಟೇಸಲ ಲಸಿಕೆ ಹಾಕಿಸಿದ್ದರೂ,  ಇಂದು ಮತ್ತೆ ಲಸಿಕೆಯನ್ನು ಹಾಕಿಸಬೇಕಾಗಿರುತ್ತದೆ.  ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಅಭಿಯಾನಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆಯಿಂದಾಗಿ, ಈ ರೋಗದ ನಿರ್ಮೂಲನೆಯಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ.
ಅರಸೀಕೆರೆ ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಫಿಜಿಶಿಯನ್ ಡಾ|| ಷಡಾಕ್ಷರಿ ರವರು ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಿದರು


ಅರಸೀಕೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು


ಅರಸೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು

ಅರಸೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು

ಅರಸೀಕೆರೆ ಪಟ್ಟಣದ ರೈಲು ನಿಲ್ದಾಣದಲ್ಲಿ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಲಾಯಿತು

Share:

ಶನಿವಾರ, ಏಪ್ರಿಲ್ 1, 2017

ಇತಿಹಾಸದ ಪುಟ ಸೇರಿದ “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು”

ಅರಸೀಕೆರೆ :  1913ನೇ ಇಸವಿಯ ಅಕ್ಟೋಬರ್ 2 ರಂದು, ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ರಾಜರ್ಷಿ ಶ್ರೀಮಾನ್ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಶ್ರಯದಲ್ಲಿ, ಜಗತ್ತಿನ ಅತ್ಯುತ್ತಮ ಇಂಜಿನಿಯರ್ ಎಂದು ಸ್ಮರಿಸುವ, ಮೈಸೂರು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿಯಲ್ಲಿ ಸ್ಥಾಪನೆಗೊಂಡು  ಕಳೆದ 104 ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ, ರಾಜ್ಯ ಸರ್ಕಾರದ ಬಹುತೇಕ ವ್ಯವಹಾರಗಳಿಗೆ, ಸರ್ಕಾರಿ ನೌಕರರಿಗೆ ಹಾಗೂ ಪಿಂಚಿಣಿದಾರರಿಗೆ ವ್ಯವಹರಿಸುವ ಬ್ಯಾಂಕ್ ಆಗಿದ್ದ “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಇದೇ ಏಪ್ರಿಲ್ 1 ರಿಂದ “ಭಾರತೀಯ ಸ್ಟೇಟ್ ಬ್ಯಾಂಕ್” ನಲ್ಲಿ ಅಧಿಕೃತವಾಗಿ ವಿಲೀನಗೊಳ್ಳುವ ಮೂಲಕ ತನ್ನ ಶತಮಾನದ ವೈಭೋಗಗಳ ಯಾತ್ರೆಯನ್ನು ಮುಗಿಸಿ ಇತಿಹಾಸದ ಪುಟ ಸೇರಿತು.

1913 ರಲ್ಲಿ “ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್” ಎಂಬ ಹೆಸರಿನಿಂದ ಪ್ರಾರಂಭವಾದ ಬ್ಯಾಂಕಿನ ಯಾತ್ರೆಯು ಕಾಲದಿಂದ ಕಾಲಕ್ಕೆ ಅಭಿವೃದ್ಧಿಯನ್ನು ಹೊಂದುತ್ತಾ ಶತಮಾನ ಪೂರೈಸಿತ್ತು.  ಬ್ಯಾಂಕಿಗೆ ಮೂಲ ಬಂಡವಾಳವಾಗಿ ರೂ.20 ಲಕ್ಷ ರುಪಾಯಿಗಳನ್ನು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನೀಡಿದ್ದರು.  ಸೆಪ್ಟೆಂಬರ್ 10, 1959 ರಂದು “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಎಂದು ನಾಮಕರಣಗೊಂಡು “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ” ದ ಸಹವರ್ತಿ ಬ್ಯಾಂಕ್ ಆಗಿ ಕಾರ್ಯನಿರ್ವಹಣೆ ಪ್ರಾರಂಭಿಸಿತು. 2013 ರಲ್ಲಿ ಶತಮಾನೋತ್ಸವ ವರ್ಷ ಆಚರಿಸಿಕೊಂಡಿತ್ತು.

ಏಪ್ರಿಲ್ 1, 2017 ನೇ ತಾರೀಖಿನಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು, ಸ್ಟೇಟ್ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಈ ಐದು ಬ್ಯಾಂಕುಗಳು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳ್ಳಲಿವೆ.

ಬ್ಯಾಂಕುಗಳ ಈ ವಿಲೀನ ಪ್ರಕ್ರಿಯೆಯಿಂದ ಈ ಮೇಲಿನ ಐದು ಬ್ಯಾಂಕಿನಲ್ಲಿ ವ್ಯವಹರಿಸುತ್ತಿರುವ ಗ್ರಾಹಕರುಗಳು ಇನ್ನು ಮುಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಲಿದ್ದಾರೆ.  ಏಪ್ರಿಲ್ 24 ರಿಂದ ಬ್ಯಾಂಕಿನ ದಾಖಲೆಗಳ ವಿಲೀನ ಪ್ರಕ್ರಿಯೆ (Data Merger) ನಡೆಯುವುದರಿಂದ ಈ ಗ್ರಾಹಕರುಗಳ ಖಾತೆ ಸಂಖ್ಯೆ ಬದಲಾಗಬಹುದಾದ ಸಾಧ್ಯತೆಗಳಿವೆ, ಜೊತೆಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು ಹಾಗೂ ಬ್ಯಾಂಕ್ ಚೆಕ್ ಬುಕ್ಕುಗಳೂ ಬದಲಾಗಲಿವೆ.  ಆನ್ ಲೈನ್ ನಲ್ಲಿ ವ್ಯವಹರಿಸುವವರು ಸಹ ತಮ್ಮ ಲಾಗಿನ್ ಐಡಿ ಗಳನ್ನು ಹೊಸದಾಗಿ ಪಡೆಯಬೇಕಾಗಬಹುದು.  ಇವುಗಳಿಂದಾಗಿ ಗ್ರಾಹಕರು ಅಲ್ಪಕಾಲದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಅರಸೀಕೆರೆ ಪಟ್ಟಣದಲ್ಲಿ ಹಾಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂರು ಶಾಖೆಯನ್ನು ಹೊಂದಿದ್ದು, ಬಿಹೆಚ್ ರಸ್ತೆಯಲ್ಲಿ ಮುಖ್ಯ ಶಾಖೆ, ಗಣಪತಿ ಪೆಂಡಾಲ್ ರಸ್ತೆಯಲ್ಲಿರುವ ಬಜಾರ್ ಶಾಖೆ ಹಾಗೂ ತಾಲ್ಲೂಕು ಕಛೇರಿಯ ಪಕ್ಕದಲ್ಲಿ ಒಂದು ಶಾಖೆಯನ್ನು ಹೊಂದಿದೆ. ಈಗಿನ ವಿಲೀನ ಪ್ರಕ್ರಿಯೆಯಿಂದಾಗಿ ಅರಸೀಕೆರೆ ಪಟ್ಟಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಟ್ಟು ನಾಲ್ಕು ಶಾಖೆಗಳಾಗಲಿದ್ದು, ಇವುಗಳಲ್ಲಿ ಒಂದೆರಡು ಶಾಖೆ ಕಡಿಮೆ ಮಾಡುವ ಸಾಧ್ಯತೆಗಳಿವೆ.  ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಪ್ರಕಟವಾಗಿಲ್ಲ.

ಕನ್ನಡ ನಾಡಿನ ಜನರೊಂದಿಗೆ ಶತಮಾನಗಳಷ್ಟು ಕಾಲ ಸಂಪರ್ಕ ಹೊಂದಿದ್ದ “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು” ಇನ್ನು ಮುಂದೆ ನೆನಪು ಮಾತ್ರ..

(ಮಾಹಿತಿಗಳು : ವಿಕಿಪೀಡಿಯಾ ಹಾಗೂ ಇಂಟರ್ ನೆಟ್)


ಅರಸೀಕೆರೆ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯಶಾಖೆಯ ನಾಮಫಲಕವನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿಸಲಾಯಿತು

ಅರಸೀಕೆರೆ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯಶಾಖೆಯ ನಾಮಫಲಕವನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಯಿಸಲಾಯಿತು

Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....