ಶನಿವಾರ, ನವೆಂಬರ್ 10, 2018

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ ವಿಸರ್ಜನಾ ಮಹೋತ್ಸವ

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯವರ 77 ನೇ ವರ್ಷದ ವಿಸರ್ಜನಾ ಮಹೋತ್ಸವವು ಅದ್ದೂರಿಯಿಂದ ಆಚರಿಸಲ್ಪಟ್ಟಿತು. 

ನೆನ್ನೆ ಸಂಜೆ ಪ್ರಾರಂಭಗೊಂಡಿದ್ದ ಶ್ರೀಯವರ ಉತ್ಸವವು ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ, ಸಂಜೆ 8 ಗಂಟೆಯ ಸಮಯಕ್ಕೆ ಕಂತೇನಹಳ್ಳಿ ಕೆರೆಯ ಬಳಿ ಆಗಮಿಸಿತು. ಕಂತೇನಹಳ್ಳಿ ನಿವಾಸಿಗಳು ಶ್ರೀಯವರಿಗೆ ಪೂಜೆ ಸಲ್ಲಿಸಿದ ನಂತರ, ಕೆರಯಂಗಳದಲ್ಲಿ ಅರಸೀಕೆರೆಯ ಹೆಸರಾಂತ ರಾಜ್ ಕಮಲ್ ಫೈರ್ ವರ್ಕ್ಸ ಮಾಲೀಕರಾದ ಶ್ರೀ ಎ.ಆರ್.ಶಂಕರಾಚಾರ್ ರವರಿಂದ ಚಿತ್ತಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು.  ನಂತರ ಶ್ರೀಯವರನ್ನು ಕ್ರೇನ್ ಮೂಲಕ ಕಂತೆನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಅರಸೀಕೆರೆ ಪೊಲೀಸ್ ಡಿ.ವೈ.ಎಸ್.ಪಿ ಶ್ರೀ ಸದಾನಂದ ತಿಪ್ಪಣ್ಣವರ ರವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.








Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....