ಸೋಮವಾರ, ಡಿಸೆಂಬರ್ 12, 2016

ಅಚ್ಛೇ ದಿನ್

"ದೇಶಕ್ಕೆ ಅಚ್ಛೇ (ಒಳ್ಳೆಯ) ದಿನ ಬರಬೇಕೆಂದರೆ, ನಾವೂ ಅಚ್ಛೇ (ಒಳ್ಳೆಯ) ಜನ ಆಗಬೇಕು"

ಕಳೆದ ಕೆಲವು ದಿನಗಳಿಂದ ಆದಾಯ ತೆರಿಗೆ (IT) ಹಾಗೂ ಜಾರಿ ನಿರ್ದೇಶನಾಲಯ (ED) ಇಲಾಖೆಯವರ ದಾಳಿಯಲ್ಲಿ ದೊರೆಯುತ್ತಿರುವ ಹಣ, ಚಿನ್ನಗಳ ವಿವರಗಳನ್ನು ಓದುತ್ತಿದ್ದರೆ ಮೈ ಜುಂ ಎನ್ನಿಸುತ್ತಿದೆ.  ಈ ಜನರಿಗೆ ಕೋಟಿ ಕೋಟಿಗಳು ಲೆಕ್ಕಕ್ಕೇ ಇಲ್ಲದಂತಿದೆ. ಅಕ್ರವಾಗಿ ಸಂಪಾದಿಸಿರುವ ಹಣ, ಚಿನ್ನವನ್ನು ಮುಚ್ಚಿಡಲು ದಿನಕ್ಕೊಂದು ಹೊಸಹೊಸ ಜಾಗಗಳನ್ನು ಹುಡುಕುತ್ತಿದ್ದಾರೆ...   

ಇದೆಂತಹ ದಾಹ... ಇದೆಂತಹ ವ್ಯಾಮೋಹ... ಇದೆಂತಹ ದುರಾಸೆ... ಯಾರಿಗಾಗಿ ಈ ಹಣ, ಈ ಚಿನ್ನ, ಆಸ್ತಿ....  ಇದಕ್ಕೊಂದು ಮಿತಿ ಬೇಡವೇ... ಈ ವ್ಯಕ್ತಿಗಳು ತಾವು ಎಷ್ಟು ವರ್ಷಗಳ ಕಾಲ ಬದುಕಿರಬಹುದು ಎಂದು ತಿಳಿದುಕೊಂಡಿರಬಹುದು... 100 ವರ್ಷ, 200 ವರ್ಷ... ಅಥವಾ ಸಾವೇ ಇಲ್ಲದವರೇ... ?... ಇವರ ಜೀವಿತಾವಧಿಯಲ್ಲಿ ಈ ಹಣ, ಚಿನ್ನ, ಆಸ್ತಿಯನ್ನು ಇವರಿಂದ ಅನುಭವಿಸಲು ಸಾಧ್ಯವೇ...? ಏತಕ್ಕಾಗಿ ಇಷ್ಟೆಲ್ಲಾ ಗಳಿಸಿರುವುದು....? ಇಷ್ಟಾದರೂ ತೃಪ್ತಿಯಾಗಿಲ್ಲವೇ...? ಇನ್ನೂ ಎಷ್ಟು ಅವಶ್ಯಕತೆ ಇದೆ ಇವರಿಗೆ..?

ಒಬ್ಬ ವ್ಯಕ್ತಿ ದೇಶ ಬದಲಿಸಲು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಈ ಭಾರತ ದೇಶವನ್ನು ಉದ್ಧಾರ ಮಾಡುತ್ತೇನೆ, ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂಬ ಶಪಥ ಮಾಡಿ ಹಗಲು ರಾತ್ರಿ ಎನ್ನದೇ ಕೆಲಸ ನಿರ್ವಹಿಸುತ್ತಿರುವ ಮೋದಿ ಒಂದು ಕಡೆಯಾದರೆ, ಮತ್ತೊಂದು ಕಡೆ  ಈ ಬೃಹತ್ ಯೋಜನೆಯನ್ನೇ ಬುಡಬೇಲು ಮಾಡಲು ಹೊಸಹೊಸ ಉಪಾಯಗಳನ್ನು ಹುಡುಕಿ ಕಾಳಧನಿಕರ ಹಣವನ್ನು ಪರಿವರ್ತಿಸಿಕೊಡುತ್ತಿರುವ ವಿವಿಧ ಬ್ಯಾಂಕುಗಳ ಅಧಿಕಾರಿಗಳು....

ನಿಜ... ಕಳೆದ ಮೂವತ್ತು ದಿನಗಳಿಂದ  ನಮ್ಮಂತಹ ಜನಸಾಮಾನ್ಯರಿಗೆ ಹಣಕಾಸಿನ ವಿಷಯದಲ್ಲಿ ತೊಂದರೆಯಾಗಿದೆ....  ನಮ್ಮ ಪರಿಶ್ರಮದಿಂದ, ನಿಯತ್ತಿನಿಂದ ಗಳಿಸಿರುವ ನಮ್ಮ ಹಣವನ್ನು ಬ್ಯಾಂಕುಗಳಿಂದ ಹೊರತೆಗೆಯಲು ಆಗುತ್ತಿಲ್ಲ.  ಶುಭ-ಅಶುಭ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಹರಸಾಹಸ ಪಡಬೇಕಾಗಿದೆ. ಕಟ್ಟಡ ನಿರ್ಮಾಣಕ್ಕೆ ಕೈಹಾಕಿರುವವರಿಗೂ ನೂರೆಂಟು ತೊಂದರೆಯಾಗಿದೆ.  ಕಾರ್ಮಿಕವರ್ಗಕ್ಕೆ ಕೂಲಿ ಹಣ ಸರಿಯಾಗಿ ಪಾವತಿಯಾಗುತ್ತಿಲ್ಲ... ವ್ಯಾಪಾರ ವಹಿವಾಟುಗಳು ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದೆ.  ಆಸ್ಪತ್ರೆಗಳಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿದೆ.

ಆದರೂ....  ಮೋದಿಯವರ ಈ ಕ್ರಮದಿಂದ ಈಗ ತೊಂದರೆಯಾದರೂ ಮುಂದೆ ಒಳ್ಳೆಯದಾಗಬಹುದು, ಐವತ್ತು ದಿನಗಳ ಅವಕಾಶವನ್ನು ಕೇಳಿದ ಮೋದಿಗಾಗಿ ಈ ತೊಂದರೆ ಅನುಭವಿಸೋಣ ಎಂದು ನಮ್ಮಂತಹ ಕೋಟ್ಯಾಂತರ ಜನರು ಈ ತಾತ್ಕಾಲಿಕ ನೋವನ್ನು ಸಹಿಸಿಕೊಂಡಿದ್ದೇವೆ....

"ಅಕಸ್ಮಾತ್ ಈ ನೋಟುರದ್ದತಿ ಯೋಜನೆಯು ವಿಫಲವಾಯಿತೆಂದರೆ... ಅದು ಖಂಡಿತ ಮೋದಿಯ ಸೋಲಲ್ಲ... ಬದಲಿಗೆ ಈ ದೇಶದ ದುರಾದೃಷ್ಟ ಅಷ್ಟೆ"

ಶ್ರೀರಾಮ ಜಮದಗ್ನಿ

ಅರಸೀಕೆರೆ.
Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....