ಶುಕ್ರವಾರ, ಡಿಸೆಂಬರ್ 22, 2017

ಶಿವಸಂಚಾರ ನಾಟಕೋತ್ಸವ : ಸಾಯೋ ಆಟ

"ಶಿವಸಂಚಾರ ನಾಟಕೋತ್ಸವ"


ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿರುವ "ಶಿವಸಂಚಾರ ನಾಟಕೋತ್ಸವ"ದ ಕೊನೆಯ ದಿನದ ಕಾರ್ಯಕ್ರಮವು ಇಂದು ಸಂಜೆ ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮಿಗಳು ಮತ್ತು ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಜರುಗಿತು. ಬಿಜೆಪಿ ಮುಖಂಡರಾದ ಜಿವಿಟಿ ಬಸವರಾಜು ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಇಂದು ಸಂಜೆ ಪ್ರದರ್ಶನಗೊಂಡ ನಾಟಕ "ಸಾಯೋ ಆಟ"

ಜ್ಞಾನಪೀಠ ಪ್ರಶಸ್ತಿ ವಿಜೇತರಾದ ದ.ರಾ.ಬೇಂದ್ರೆಯವರು ರಚಿಸಿರುವ ಹಾಸ್ಯ ನಾಟಕ "ಸಾಯೋ ಆಟ".  ಈ ನಾಟಕ ನಮ್ಮ ಸುತ್ತಲಿನ ಸಮಾಜ, ರಾಜಕಾರಣ ಮತ್ತು ವ್ಯಕ್ತಿಗಳ ಮುಖಕ್ಕೆ ಕನ್ನಡಿ ಹಿಡಿವ, ನ್ಯೂನ್ಯತೆಗಳನ್ನು ತಿಳಿಸುವ ಕೆಲಸವನ್ನು ಲಘು ದಾಟಿಯಲ್ಲಿ, ಪ್ರಹಸನ ಮಾದರಿಯಲ್ಲಿ ನಮ್ಮ ಮುಂದಿಡುತ್ತಾ ಹೋಗುತ್ತದೆ.

ಕನ್ನಹಾಕಲು ಬಂದ ಕಳ್ಳನ ಮೇಲೆ ಗೋಡೆ ಬಿದ್ದು ಅವನು ಸಾಯುತ್ತಾನೆ. ಆ ಕಳ್ಳನ ಹೆಂಡತಿ ತನ್ನ ಗಂಡನ ಸಾವಿಗೆ ಕಾರಣರಾದವರನ್ನು ಶಿಕ್ಷಿಸುವಂತೆ ರಾಜನಲ್ಲಿ ಬೇಡುತ್ತಾಳೆ.  ಮೊದಲು ಗೋಡೆಯ ಯಜಮಾನ, ಗೋಡೆ ಕಟ್ಟಿದ ಮೇಸ್ತ್ರಿ, ಕೂಲಿ ಹೀಗೆ ಒಬ್ಬರು ಮತ್ತೊಬ್ಬರ ಮೇಲೆ ಅಪವಾದ ಹೊರಿಸುತ್ತಾ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.   ಈ ನಾಟಕದ ಮೂಲಕ ಗಬ್ಬೆದ್ದು ಹೋದ ರಾಜಕಾರಣ, ಸಾಮಾಜಿಕ ವ್ಯವಸ್ಥೆ ಮತ್ತು ವ್ಯಕ್ತಿಗಳ ಠಕ್ಕತನಗಳು ಬೆಳಕಿಗೆ ಬರುತ್ತವೆ.









Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....