ಗುರುವಾರ, ಡಿಸೆಂಬರ್ 21, 2017

ಶಿವ ಸಂಚಾರ ನಾಟಕೋತ್ಸವ : ಚೋರ ಚರಣದಾಸ

"ಶಿವ ಸಂಚಾರ ನಾಟಕೋತ್ಸವ"

ಶ್ರೀ ಶಿವಕುಮಾರ ಬಳಗ ಮತ್ತು ತರಳಬಾಳು ಯುವ ವೇದಿಕೆ, ಅರಸೀಕೆರೆ ತಾಲ್ಲೂಕು ಇವರುಗಳ ಸಂಯುಕ್ತಾಶ್ರಯದಲ್ಲಿ, ಅರಸೀಕೆರೆ ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿರುವ  "ಶಿವಸಂಚಾರ ನಾಟಕೋತ್ಸವ"ದ ಎರಡನೇ ದಿನದ ನಾಟಕೋತ್ಸವದ ಉದ್ಘಾಟನಾ ಸಮಾರಂಭ ಇಂದು ಸಂಜೆ ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಅರಸೀಕೆರೆಯ ಶಾಸಕರಾದ ಶ್ರೀ. ಕೆ.ಎಂ.ಶಿವಲಿಂಗೇಗೌಡರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.

ಇಂದು ಸಂಜೆ ಪ್ರದರ್ಶನಗೊಂಡ ನಾಟಕ "ಚೋರ ಚರಣದಾಸ"

ಪ್ರಖ್ಯಾತ ನಿರ್ದೇಶಕ ಹಬೀಬ್ ತನ್ವೀರ್ ರವರು ರಾಜಸ್ಥಾನದ ಒಂದು ಜಾನಪದ ಕಥೆಯನ್ನು ಆಧರಿಸಿ ಹಿಂದಿಯಲ್ಲಿ ರೂಪಿಸಿದ ನಾಟಕವನ್ನು ಕನ್ನಡಕ್ಕೆ ಡಾ.ಸಿದ್ದಲಿಂಗ ಪಟ್ಟಣಶಟ್ಟಿರವರು ಅನುವಾದಿಸಿ ರಂಗರೂಪಕ್ಕೆ ತಂದಿದ್ದಾರೆ.  ಚರಣದಾಸ ಎಂಬ ಒಬ್ಬ ಸಾಮಾನ್ಯ ಕಳ್ಳ ಮತ್ತು ಅವನ ವಿಚಿತ್ರ ನಡೆ, ಬಡವರ ಮತ್ತು ಶೋಷಿತರ ಬಗೆಗಿನ ಕಳಕಳಿ, ಧರ್ಮ, ಗುರು, ಸಂಪ್ರದಾಯ ಮತ್ತು ಸತ್ಯನಿಷ್ಠೆ ಮುಂತಾದ ಗುಣಗಳನು ಎತ್ತಿತೋರಿಸುವ ಈ ನಾಟಕದಲ್ಲಿ ಹಾಸ್ಯ, ಸತ್ಯ, ನೀತಿ ಮತ್ತು ಸರಳ ಜೀವನದ ಪ್ರತಿಪಾದನೆಯಿದೆ.  ಈ ನಾಟಕವನ್ನು ಮಾಲತೇಶ್ ರಾ ಬಡಿಗೇರ್ ರವರು ನಿರ್ದೇಶನ ಮಾಡಿದ್ದಾರೆ.











Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....