ಶನಿವಾರ, ಜುಲೈ 8, 2017

ಅರಸೀಕೆರೆ ಮೂಲಕ ಸಾಗಿದ ಮಾನ್ಸೂನ್ ಬೈಸಿಕಲ್ ಸವಾರರು

Arsikere


ಬೆಂಗಳೂರಿನ Cadence90  ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ “ಮಾನ್ಸೂನ್ ಬೈಕಿಂಗ್” (ಹಾಸನ-ಚಿಕ್ಕಮಗಳೂರು-ಹಾಸನ) ಪ್ರಯುಕ್ತ ಇಂದು ಬೆಳಿಗ್ಗೆ 31 ಸೈಕ್ಲಿಸ್ಟ್ ಗಳು ಅರಸೀಕೆರೆ ಪಟ್ಟಣದ ಮೂಲಕ ಸಾಗಿದರು.  ಬೆಳಿಗ್ಗೆ 8.30 ರ ಸಮಯಕ್ಕೆ ಅರಸೀಕೆರೆ ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿರುವ ಕೆ.ಪಿ.ಎಸ್ ರವರ ಹೆಚ್.ಪಿ ಪೆಟ್ರೋಲ್ ಬಂಕ್ ಬಳಿ ಆಗಮಿಸಿದ ಸೈಕಲ್ ಸವಾರರು, ಅಲ್ಲಿ ಲಘು ಉಪಹಾರ ಸೇವನೆ ಮಾಡಿದರು.  16 ವರ್ಷದಿಂದ 48 ವರ್ಷದ ವಯೋಮಾನದ 31 ಜನರ ತಂಡದಲ್ಲಿ 6 ಜನ ಮಹಿಳಾ ಸೈಕಲ್ ಸವಾರರೂ ಇದ್ದರು. 50 ಸಾವಿರ ರೂಪಾಯಿಯಿಂದ 5 ಲಕ್ಷ ರೂಪಾಯಿ ಬೆಲೆಬಾಳುವ ಹೈಬ್ರೀಡ್ ಸೈಕಲ್ ಗಳು ಈ ತಂಡದಲ್ಲಿದ್ದವು.

Cadence90 ಸಂಸ್ಥೆಯ ಮುಖ್ಯಸ್ಥೆ ಚೇತನ್ ರಾಮ್ ರವರು ಮಾತನಾಡಿ, ತಮ್ಮ ಸಂಸ್ಥೆಯ ವತಿಯಿಂದ ಪ್ರತಿವರ್ಷ ಮಾನ್ಸೂನ್ ಸಮಯದಲ್ಲಿ ಸೈಕಲ್ ಸವಾರಿಯನ್ನು ಆಯೋಜಿಸಲಾಗುತ್ತದೆ.  ಇದರಲ್ಲಿ ವಿಶೇಷ ತರಬೇತಿಯನ್ನು ಹೊಂದಿದ ವಿವಿಧ ವಯೋಮಾನದ ಸೈಕಲ್ ಸವಾರರು ಪಾಲ್ಗೊಳ್ಳುತ್ತಾರೆ.  ಸವಾರಿಯ ಬಗ್ಗೆ ಸಂಪೂರ್ಣ ಮುಜಾಗರೂಕತಾ ಕ್ರಮಗಳನ್ನು ಕೈಗೊಂಡಿರುತ್ತೇವೆ. ಸೂಕ್ತ ಸ್ಥಳಗಳಲ್ಲಿ ಊಟ-ಉಪಹಾರ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿರುತ್ತದೆ.  ಸಮಯದಲ್ಲಿ ತುರ್ತು ಸಂದರ್ಭಕ್ಕಾಗಿ ಜೊತೆಯಲ್ಲಿ ವಿಶೇಷ ವಾಹನಗಳನ್ನು ಕರೆದೊಯ್ಯಲಾಗುತ್ತದೆ.  ಈ ಸಲದ ಮಾನ್ಸೂಸ್ ಸವಾರಿಯು ಹಾಸನದಿಂದ ಪ್ರಾರಂಭವಾಗಿ ಅರಸೀಕೆರೆ, ಕಡೂರು, ಬೀರೂರು, ಲಿಂಗದಹಳ್ಳಿ ಮುಖಾಂತರ ಚಿಕ್ಕಮಗಳೂರು ತಲುಪಿ, ಅಲ್ಲಿಂದ ಬೇಲೂರು ಮುಖಾಂತರ ಹಾಸನ ತಲುಪುವಂತೆ ಆಯೋಜಿಸಲಾಗಿದ್ದು, ಇದರ ಒಟ್ಟು ದೂರ ಅಂದಾಜು 200 ಕಿಮೀ ಆಗಲಿದೆ ಎಂದು ತಿಳಿಸಿದರು.  ಅರಸೀಕೆರೆಯಲ್ಲಿ ಉಪಹಾರ ಸೇವನೆಗೆ ಸ್ಥಳಾವಕಾಶ ನೀಡಿದ ಕೆ.ಪಿ.ಎಸ್ ಪ್ರಸನ್ನ ರವರಿಗೆ ಹಾಗೂ ಉಪಹಾರದ ವ್ಯವಸ್ಥೆಗಳನ್ನು ಮಾಡಿದ್ದ ಹೆಚ್.ರಾಮಚಂದ್ರ ರವರಿಗೆ ಧನ್ಯವಾದಗಳನ್ನು ತಿಳಿಸಿದರು.










Share:

ಬುಧವಾರ, ಜುಲೈ 5, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾ ರಥೋತ್ಸವ

Arsikere

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾ ರಥೋತ್ಸವವು ಬುಧವಾರದಂದು ಭಕ್ತ ಜನಸಾಗರದ ಸಮ್ಮುಖದಲ್ಲಿ ವೈಭೋಗದಿಂದ ಜರುಗಿತು. 

ಇಂದು ಬೆಳಗಿನಿಂದಲೇ ವಿಶೇಷ ಸೇವೆಗಳು ಪ್ರಾರಂಭಗೊಂಡವು, ಯಾತ್ರಾ ದಾನೋತ್ಸವ, ಶ್ರೀ ಕೃಷ್ಣಗಂಧೋತ್ಸವ, ಹೂವಿನ ಸೇವೆ, ನಿತ್ಯೋತ್ಸವ, ಪ್ರಾಕಾರೋತ್ಸವ, ಸೂರ್ಯಮಂಡಲೋತ್ಸವ, ರಥ ಮಂಟಪ ಸೇವೆ, ವಸಂತಸೇವೆ ಹಾಗೂ ರಥದಮೇಲೆ ಪೊಂಗಲು ಸೇವೆಗಳು ಜರುಗಿದವು.  11 ಗಂಟೆಯಿಂದ 12.30 ರೊಳಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ವೈಖಾನಸಾಗಮರೀತ್ಯ ರಥಾರೋಹಣ ಜರುಗಿತು.  ನೆರೆದಿದ್ದ ಸಹಸ್ರಾರು ಭಕ್ತಾಧಿಗಳ ಗೋವಿಂದ ನಾಮಸ್ಮರಣೆಯ ಜಯಘೋಷದ ನಡುವೆ ರಥವನ್ನು ಎಳೆಯಲಾಯಿತು.  ರಥದ ಕಳಸಕ್ಕೆ ಭಕ್ತರು ಬಾಳೆಹಣ್ಣನ್ನು ತೂರಿ ಭಕ್ತಿಸಮರ್ಪಿಸಿದರು.

ಅರಸೀಕೆರೆ ಶಾಸಕರಾದ ಕೆ.ಎಮ್.ಶಿವಲಿಂಗೇಗೌಡರು, ಹಾಸನ ಜಿ.ಪಂ ಅಧ್ಯಕ್ಷೆ ಶ್ವೇತ ದೇವರಾಜ್, ಅರಸೀಕೆರೆ ನಗರಸಭಾಧ್ಯಕ್ಷ ಎಂ.ಸಮೀಉಲ್ಲ, ಉಪಾಧ್ಯಕ್ಷ ಪಾರ್ಥಸಾರಥಿ, ಅರಸೀಕೆರೆ ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರಾನಾಯ್ಕ, ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಎನ್.ವಿ.ನಟೇಶ್ ಸೇರಿದಂತೆ ತಾಲ್ಲೂಕಿನ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರುಗಳು, ಕಂದಾಯ ಇಲಾಖೆ, ಮುಜರಾಯಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ರಥೋತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಆರ್.ನಾಗರಾಜ್ ಹಾಗೂ ಸಮಿತಿಯ ಸದಸ್ಯರುಗಳು, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅರಸೀಕೆರೆ ಉಪವಿಭಾಗದ ಡಿ.ವೈ.ಎಸ್.ಪಿ ಧಶರಥಮೂರ್ತಿ ರವರ ನೇತೃತ್ವದಲ್ಲಿ ಜಿಲ್ಲೆಯ ಅನೇಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾರ್ಯನಿರ್ವಹಿಸಿದರು.  ಸಿಸಿಟಿವಿ ಕ್ಯಾಮರಾಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿತ್ತು.

ಅರಸೀಕೆರೆ ತಾಲ್ಲೂಕು ಆರೋಗ್ಯ ಇಲಾಖೆಯ ವತಿಯಿಂದ ಜಾತ್ರಾ ಮಹೋತ್ಸವದಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಆರೋಗ್ಯ ಕೇಂದ್ರವನ್ನು ತೆರೆದು ಅಲ್ಲಿಗೆ ವೈದ್ಯರುಗಳನ್ನು ನೇಮಿಸಲಾಗಿತ್ತು.


ಚಿತ್ರಗಳು : ಶ್ರೀರಾಮ ಜಮದಗ್ನಿ












Share:

ಸೋಮವಾರ, ಜುಲೈ 3, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಆರನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಆರನೆಯ ದಿನವಾದ ಇಂದು (ಆಷಾಢ ಶುದ್ಧ ದಶಮಿ, 03-07-17 ಸೋಮವಾರದಂದು) ಬೆಳಿಗ್ಗೆ ನಿತ್ಯೋತ್ಸವ, ಪ್ರಹ್ಲಾದ ಪರಿಪಾಲನೋತ್ಸವ ಹಾಗೂ ರಾತ್ರಿ  ಶ್ರೀಯವರಿಗೆ ದೊಡ್ಡ ಗರುಡೋತ್ಸವ, ಕೆಂಚರಾಯಸ್ವಾಮಿಯ ಸೇವೆ ಜರುಗಿತು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ಟಿ.ಎಸ್.ಚಂದ್ರಮೌಳಿ




Share:

ಭಾನುವಾರ, ಜುಲೈ 2, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಐದನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಐದನೆಯ ದಿನವಾದ ಇಂದು (ಆಷಾಢ ಶುದ್ಧ ನವಮಿ, 02-07-17 ಭಾನುವಾರದಂದು) ಬೆಳಿಗ್ಗೆ ನಿತ್ಯೋತ್ಸವ ಹಾಗೂ ರಾತ್ರಿ  ಶ್ರೀಯವರಿಗೆ  ಪುಷ್ಪಮಂಟಪೋತ್ಸವ ಸೇವೆ ಜರುಗಿತು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)


Share:

ಶನಿವಾರ, ಜುಲೈ 1, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನದ ಕಾರ್ಯಕ್ರಮಗಳು

ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ನಾಲ್ಕನೆಯ ದಿನವಾದ ಇಂದು (ಆಷಾಢ ಶುದ್ಧ ಅಷ್ಟಮಿ, 01-07-17 ಶನಿವಾರದಂದು) ರಾತ್ರಿ  ಶ್ರೀಯವರಿಗೆ  ಶೇಷವಾಹನೋತ್ಸವ ಸೇವೆ ಜರುಗಿತು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)



Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....