ಶುಕ್ರವಾರ, ಜುಲೈ 28, 2017

ಅಶಕ್ತಸ್ತು ಭವೇತ್ ಸಾಧುಃ ಬ್ರಹ್ಮಚಾರೀ ಚ ನಿರ್ಧನಃ |
ವ್ಯಾಧಿತೋ ದೇವಭಕ್ತಶ್ಚ ವೃದ್ಧಾ ನಾರೀ ಪತಿವ್ರತಾ ||
’ಬಲವಿಲ್ಲದವನು ಸಜ್ಜನನಾಗುತ್ತಾನೆ. ಹಣವಿಲ್ಲದವನು ಬ್ರಹ್ಮಚಾರಿಯಾಗುತ್ತಾನೆ. ರೋಗಪೀಡಿತನು ದೇವಭಕ್ತನಾಗುತ್ತಾನೆ. ವಯಸ್ಸಾದ ಹೆಣ್ಣು ಹದಿಬದೆಯಾಗುತ್ತಾಳೆ.’
ಚಾಣಕ್ಯನೀತಿದರ್ಪಣದಲ್ಲಿ ಕಾಣಸಿಗುವ ಈ ಪದ್ಯ ವಿಡಂಬನಾತ್ಮಕವಾದದ್ದು. ಸಜ್ಜನತೆ ಬ್ರಹ್ಮಚರ್ಯ ದೇವಭಕ್ತಿ ಪಾತಿವ್ರತ್ಯ – ಇವುಗಳಲ್ಲೊಂದೊಂದೂ ಅತ್ಯಂತ ಮೌಲ್ಯಯುತವಾದದ್ದು. ಆದರೆ ಬೇರೆ ಗತಿಯಿಲ್ಲದೆ, ಅನಿವಾರ್ಯವಾಗಿ ಅದನ್ನೊಪ್ಪಿಕೊಳ್ಳಬೇಕಾಗಿ ಬಂದಾಗಲಷ್ಟೇ ಸ್ವೀಕರಿಸುವಾತನು ಆದರಾರ್ಹನಾಗುವುದಿಲ್ಲ. ’ನಪುಂಸಕನ ಸಂನ್ಯಾಸ’ ಎಂಬ ನುಡಿಗಟ್ಟೂ ಇದೇ ಅರ್ಥದಲ್ಲಿರುವುದು. ತಾತ್ಪರ್ಯವಿಷ್ಟು - ಸಾಮರ್ಥ್ಯ-ಅವಕಾಶಗಳಿದ್ದಾಗಲೂ ಮೌಲ್ಯವನ್ನು ಮನಗಂಡು ಯಾರು ಸಾಜ್ಜನ್ಯವೇ ಮೊದಲಾದ ಗುಣಗಳನ್ನು ಹೊಂದುತ್ತಾರೋ ಅವರೇ ಮಾನ್ಯರು. ದೌರ್ಬಲ್ಯಾದಿ ಅನಿವಾರ್ಯತೆಗಳಿಂದ ಬರುವ ಸಾಧುತ್ವಾದಿಗಳು ಮೌಲ್ಯಗಳಾಗಲಾರವು.
’ವೃದ್ಧಾ ನಾರೀ ಪತಿವ್ರತಾ’ ಎಂಬೀ ಪಾದ ಕೊನೆಯಲ್ಲಿ ಬರುವ ಇನ್ನೊಂದು ಸುಭಾಷಿತವೂ ಇದೆ –
ಆರ್ತಾ ದೇವಾನ್ ನಮಸ್ಯಂತಿ ತಪಃ ಕುರ್ವಂತಿ ರೋಗಿಣಃ |
ನಿರ್ಧನಾ ದಾನಮಿಚ್ಛಂತಿ ವೃದ್ಧಾ ನಾರೀ ಪತಿವ್ರತಾ ||
ತಾತ್ಪರ್ಯ ಹಿಂದಿನದ್ದೇ.
ಇದೇ ಆಶಯವನ್ನು ವ್ಯಕ್ತಪಡಿಸುವ ಇನ್ನೊಂದು ಸುಭಾಷಿತ –
ನವೇ ವಯಸಿ ಯಃ ಶಾಂತಃ ಸ ಶಾಂತ ಇತಿ ಕಥ್ಯತೇ |
ಧಾತುಷು ಕ್ಷೀಯಮಾಣೇಷು ಶಾಂತಿಃ ಕಸ್ಯ ನ ಜಾಯತೇ ||
ಯೌವನದಲ್ಲಿ ಯಾರು ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿಕೊಳ್ಳುತ್ತಾನೋ ಅವನೇ ಶಾಂತ (ನಿಗ್ರಹಿ ಅಥವಾ ಸಂನ್ಯಾಸಿ) ಎಂದೆನಿಸುತ್ತಾನೆ. ಧಾತುಗಳು ಕಳೆದು ಹೋಗುತ್ತಿದ್ದಂತೆ ಯಾರು ತಾನೇ ನಿಗ್ರಹಿಗಳಾಗುವುದಿಲ್ಲ

Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....