ಸೋಮವಾರ, ಫೆಬ್ರವರಿ 19, 2018

ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿ

ಶ್ರವಣಬೆಳಗೊಳದಲ್ಲಿ ಪ್ರಧಾನಿ ಮೋದಿ

ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರವಣಬೆಳಗೊಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿರವರು ಪಾಲ್ಗೊಂಡಿದ್ದರು.  ಇಂದು ಮಧ್ಯಾನ್ಹ 1.50ಕ್ಕೆ ಚಾವುಂಡರಾಯ ವೇದಿಕೆಗೆ ಆಗಮಿಸಿದ ಪ್ರಧಾನಿಗಳು ಮೊದಲಿಗೆ ವೇದಿಕೆಯ ಎಡಭಾಗದಲ್ಲಿದ್ದ ಮುನಿಗಳಿಗೆ, ಆಚಾರ್ಯರಿಗೆ ಹಾಗೂ ಬಲಭಾಗದಲ್ಲಿದ್ದ ಮಾತಾಜಿಗಳಿಗೆ ನಮಸ್ಕರಿಸಿ ನಂತರ ಸಭಿಕರಿಗೆ ನಮಸ್ಕರಿಸಿದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎ.ಮಂಜು ರವರು ಸ್ವಾಗತಭಾಷಣ ಮಾಡಿದರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಆಶೀರ್ವಚನ ನೀಡಿದರು. ನಂತರ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಕ್ಕೆ ನೂತನವಾಗಿ ನಿರ್ಮಿಸಿರುವ 630 ಮೆಟ್ಟಿಲುಗಳನ್ನು ಹಾಗೂ ಬಾಹುಬಲಿ ಜನರಲ್ ಆಸ್ಪತ್ರೆಯನ್ನು ಶ್ರೀ ನರೇಂದ್ರ ಮೋದಿ ರವರು ಲೋಕಾರ್ಪಣೆ ಮಾಡಿದರು.  ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಪ್ರಧಾನಿಗಳನ್ನು ಸನ್ಮಾನಿಸಿದರು. ನಂತರ ಸಭೆಯನ್ನುದೇಶಿಸಿ ಪ್ರಧಾನಿಗಳು ಮಾತನಾಡಿದರು. 2.40ಕ್ಕೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವೇದಿಕೆಯಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ವಜುಭಾಯಿವಾಲ, ಕೇಂದ್ರ ಸಚಿವರುಗಳಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಮಹೇಶ್ ಶರ್ಮ ಸೇರಿದಂತೆ ಗಣ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇವತ್ತು ಚಾವುಂಡರಾಯ ವೇದಿಕೆಯ ಸುತ್ತಮುತ್ತ ಎಸ್.ಪಿ.ಜಿ ಕಮಾಂಡೋಗಳ ಸರ್ಪಗಾವಲು ಮಾಡಲಾಗಿತ್ತು.  ಕಾರ್ಯಕ್ರಮದ ಜಾಗಕ್ಕೆ ಬ್ಯಾಗುಗಳು, ನೀರಿನ ಬಾಟಲ್ ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ತರದಂತೆ ನಿರ್ಬಂಧ ಮಾಡಲಾಗಿತ್ತು.  ಪ್ರತಿಯೊಬ್ಬರನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಳಕ್ಕೆ ಕಳಿಸಲಾಗುತ್ತಿತ್ತು.









Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....