ಶುಕ್ರವಾರ, ಆಗಸ್ಟ್ 25, 2017

ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಅರಸೀಕೆರೆ ಶ್ರೀ ಪ್ರಸನ್ನ ಗಣಪತಿಯ ಆಗಮನಕ್ಕೆ ಈ ದಿನ ಆಕಾಶದಿಂದ ತುಂತುರು ಮಳೆಯ ಸಿಂಚನವಾಗಿ ಶುಭ ಮುನ್ಸೂಚನೆ ನೀಡಿದೆ.  ತಾಲ್ಲೂಕಿನಾದ್ಯಂತ ಮಳೆಬೆಳೆ ಇಲ್ಲದೇ ಜನರು ರೈತಾಪಿವರ್ಗದವರು ಕಂಗಾಲಾಗಿದ್ದಾರೆ.  ಯಾವುದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.  ಅರಸೀಕೆರೆ ಪಟ್ಟಣದ ಕೆರೆಯಲ್ಲಿ ನೀರಿಲ್ಲದೇ ಇರುವುದರಿಂದ ಕಳೆದ ಕೆಲವು ವರ್ಷಗಳಿಂದ ಗಣೇಶನ ವಿಸರ್ಜನೆಗೆ ಗುಂಡಿತೋಡಿ ಅದಕ್ಕೆ ನೀರು ತುಂಬಿಸಿ ಗಣಪತಿಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶ್ರೀ ಪ್ರಸನ್ನ ಗಣಪತಿಯ ಕೃಪೆಯಿಂದ ಈ ವರ್ಷ ನಮ್ಮ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಎಲ್ಲ ಕೆರೆಕಟ್ಟೆಗಳು ತುಂಬಿಹರಿಯಲಿ, ನಮ್ಮ ಅರಸೀಕೆರೆಯ ಕಂತೇನಹಳ್ಳಿ ಕೆರೆಯೂ ತುಂಬಿ ಕೋಡಿ ಬೀಳಲಿ, ಅದರಲ್ಲಿ ನಮ್ಮ ಹೆಮ್ಮೆಯ ಶ್ರೀ ಪ್ರಸನ್ನ ಗಣಪತಿಯವರ “ತೆಪ್ಪೋತ್ಸವ” ವೈಭವದಿಂದ ಜರುಗಲಿ ಎಂದು ಪ್ರಾರ್ಥಿಸೋಣ.

ತಮ್ಮೆಲ್ಲರಿಗೂ ಗೌರಿ ಮತ್ತು ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು


ಅರಸೀಕೆರೆ.in


Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....