ಗುರುವಾರ, ಜೂನ್ 29, 2017

ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಎರಡನೆಯ ದಿನದ ಕಾರ್ಯಕ್ರಮಗಳು

Arsikere


ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ ಎರಡನೆಯ ದಿನವಾದ ಇಂದು (ಆಷಾಢ ಶುದ್ಧ ಷಷ್ಠಿ, 29-06-17 ಗುರುವಾರದಂದು) ಬೆಳಿಗ್ಗೆ ಅರಸೀಕೆರೆ ಪಟ್ಟಣದ ತಾಲ್ಲೂಕು ಕಚೇರಿಯ ಖಜಾನೆಯಿಂದ ಶ್ರೀಯವರ ರತ್ನಖಚಿತ ಆಭರಣಗಳು ಹಾಗೂ ಬೆಳ್ಳಿ ಬಂಗಾರದ ಪೂಜಾ ಸಾಮಗ್ರಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ, ಸಾಂಪ್ರದಾಯಕ ರೀತಿಯಲ್ಲಿ ಎತ್ತಿನಗಾಡಿಯಲ್ಲಿಟ್ಟು ಮಂಗಳ ವಾದ್ಯಗಳೊಡನೆ ತಿರುಪತಿ ದೇವಾಲಯಕ್ಕೆ ತರಲಾಯಿತು. ತಾಲ್ಲೂಕು ಆಡಳಿತದ ಹಿರಿಯ ಅಧಿಕಾರಿಗಳು, ಮುಜರಾಯಿ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಕಚೇರಿಯ ಸಿಬ್ಬಂದಿಗಳು, ದೇವಸ್ಥಾನದ ಆಗಮಿಕರು, ಅರ್ಚಕರು, ರಥೋತ್ಸವ ಮಂಡಲಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹಾಜರಿದ್ದರು.

ಈ ದಿನ ಸಂಜೆ ಶ್ರೀಯವರ ದೇವಾಲಯದಲ್ಲಿ ರಕ್ಷಾಬಂಧನ, ಭೇರಿತಾಡನ ದಿಗ್ಬಲಿ, ಧ್ವಜಾರೋಹಣ ಮತ್ತು ದೇವತಾ ಆಹ್ವಾನ ಸೇವೆಗಳು ಜರುಗಿದವು.  ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.


ಚಿತ್ರಗಳು : ತಿರುಪತಿ ರಾಜ (ರಾಜಾಹುಲಿ)







Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....