ಗುರುವಾರ, ಜೂನ್ 15, 2017

ನೀರಿಗಾಗಿ ಅರಣ್ಯ - ಬೀಜ ಪ್ರಸರಣ ಕಾರ್ಯಕ್ರಮ

Arsikere


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ನಾಳೆ (ದಿನಾಂಕ 16-06-2017, ಶುಕ್ರವಾರದಂದು) ಬೆಳಿಗ್ಗೆ 9 ಗಂಟೆಗೆ, ಅರಸೀಕೆರೆ ತಾಲ್ಲೂಕು ರಾಮೇನಹಳ್ಳಿಯ ಒಬಲಾಯನ ಕೆರೆ ಆವರಣದಲ್ಲಿ  ಬೆಂಗಳೂರಿನ ನೇಯೋಟ್ ಸಂಸ್ಥೆ ಹಾಗೂ ಅರಸೀಕೆರೆ ತಾಲ್ಲೂಕು ಅರಣ್ಯ ಇಲಾಖೆಯ ಸಹಯೋಗದಲ್ಲಿ  ಜಲ ಸಂರಕ್ಷಣೆಗಾಗಿ ಬೀಜ ಪ್ರಸರಣ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಜಿ.ವಿ. ಆನಂದ ಮೂರ್ತಿ, ಕಥೆಗಾರರು ತುಮಕೂರು ಇವರು ನೆರವೇರಿಸಲಿದ್ದಾರೆ.  ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಎಂ.ಎಲ್.ಮಂಜುನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಚನ್ನರಾಯಪಟ್ಟಣ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ.ಡಿ. ತಮ್ಮಯ್ಯನವರು, ಸಾಮಾಜಿಕ ಅರಣ್ಯ ಉಪವಿಭಾಗ ಅರಸೀಕೆರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ವಿಲಿಯಂ ಪ್ರಾನ್ಸಿಸ್ ಹಾಗೂ ಅರಸೀಕೆರೆ ಪಟ್ಟಣದ ಆಫೀಸರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ. ಎನ್.ವೆಂಕಟೇಶ್ ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


Share:

1 ಕಾಮೆಂಟ್‌(ಗಳು) :

Manu ಹೇಳಿದರು...

ಜನರಿಗೆ ನೀರಿನ ಮತ್ತು ಮರಗಳ ಮಹತ್ವ ತಿಳಿಸುವ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದೆ. ಇದ್ರಲ್ಲಿ ಮಾದ್ಯಮಗಳ ಪಾತ್ರ್ಹ ತುಂಬಾ ಇದೆ.

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....