ಭಾನುವಾರ, ಮಾರ್ಚ್ 26, 2017

ತೆಂಗಿಗೆ ಬೆಂಕಿ ರೋಗ – ರೈತರಿಗೆ ಗಾಯದ ಮೇಲೆ ಬರೆ

ಸದಾ ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕುವ ಅರಸೀಕೆರೆ ತಾಲ್ಲೂಕಿನ ರೈತರು, ಕಳೆದ ಕೆಲವು ವರ್ಷಗಳಿಂದ ಅನಾವೃಷ್ಠಿಯಿಂದಾಗಿ ತೀವ್ರವಾದ ತೊಂದರೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.  ಸತತ ಮೂರು ವರ್ಷಗಳು ಸರಿಯಾದ ಮಳೆಯಾಗದಿದ್ದರಿಂದ, ಹತ್ತಾರು ವರ್ಷಗಳಿಂದ ಫಸಲು ನೀಡುತ್ತಿದ್ದ, ಬಯಲುಸೀಮೆ ರೈತರ ಜೀವನಾಡಿಯಾಗಿದ್ದ ತೆಂಗಿನ ಮರಗಳು ನೀರಿಲ್ಲದೇ ಸುಳಿಬಿದ್ದು ಒಣಗಿ ಹೋಗಿತ್ತು.  ಕೊಳವೆ ಬಾವಿಯ ಸಂಪರ್ಕ ಹೊಂದಿದ್ದ ಕೆಲವು ರೈತರು ಹೇಗೋ ತಮ್ಮ ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿತ್ತು.  ಇದೀಗ ಕೊಳವೆ ಬಾವಿಗಳಲ್ಲೂ ನೀರಿನ ಕೊರತೆ ಉಂಟಾಗಿ ಕೃಷಿ ಕಾರ್ಯಕ್ಕೆ ನೀರಿಲ್ಲದಂತಾಗಿದೆ.  ಈ ನಡುವೆ ಅರಸೀಕೆರೆ ತಾಲ್ಲೂಕಿನ ಜಾಜೂರು, ನಾಗತಿಹಳ್ಳಿ, ಬೆಂಡೇಕೆರೆ, ಎಮ್ ಹೊಸಹಳ್ಳಿ, ಹಿರಿಯೂರು ಸೇರಿದಂತೆ ಕೆಲವು ಹಳ್ಳಿಗಳಲ್ಲಿ ತೆಂಗಿನ ಮರಗಳಿಗೆ ಸಾಂಕ್ರಾಮಿಕ ರೋಗವಾದ ಬೆಂಕಿ ರೋಗ ಕಾಣಿಸಿಕೊಂಡಿದ್ದು ಗಾಯದ ಮೇಲೆ ಬರೆ ಬಿದ್ದಂತಾಗಿ, ರೈತರು ತಮ್ಮ ಮುಂದಿನ ಭವಿಷ್ಯವೇನು ಎಂದು ಯೋಚಿಸುವಂತೆ ಮಾಡಿದೆ.

ರೋಗದ ಲಕ್ಷಣ :

ಬೆಂಕಿರೋಗಕ್ಕೆ ಕಾರಣ ಕಪ್ಪುತಲೆ ಹುಳು (Black headed caterpillar) ಇದು ತೆಂಗಿನ ಗರಿಗಳ ಹಿಂಭಾಗದಲ್ಲಿ ಕುಳಿತು ಎಲೆಯ ಹಿಂಭಾವನ್ನು ತಿನ್ನುತ್ತದೆ. ಇದರಿಂದಾಗಿ ಹಸಿರಾಗಿದ್ದ ಎಲೆಗಳು ಬಣ್ಣ ಕಳೆದುಕೊಂಡು ಸುಟ್ಟುಹೋದಂತೆ ಕಾಣುತ್ತವೆ.  ಇದರಿಂದಾಗಿ ತೆಂಗಿನ ಬೆಳೆಯ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ.   ಈ ರೋಗ ನಿಯಂತ್ರಣ ಮಾಡಲು ತೋಟಗಾರಿಕಾ ಇಲಾಖೆಯವರು ಪರೋಪಜೀವಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.  ಇಲಾಖೆಯ ತಜ್ಞರ ಸಲಹೆಯನ್ನು ಪಾಲಿಸಿದಲ್ಲಿ ಒಂದೆರಡು ವರ್ಷಗಳಲ್ಲಿ ಮರ ಮತ್ತೆ ಮೊದಲಿನಂತಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಶಿವಕುಮಾರ್ ರವರು ತಿಳಿಸಿದರು.  ಈ ರೋಗವು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಒಂದು ಉತ್ತಮವಾದ ಗುಡುಗು ಸಿಡಿಲಿನ ಮಳೆಯಾದಲ್ಲಿ, ಎಲೆಯ ಮೇಲಿರುವ ಕಪ್ಪುತಲೆ ಲಾರ್ವಾಗಳು ಮಳೆ ನೀರಿನಲ್ಲಿ ಕೊಚ್ಚಿಹೋಗಿ ರೋಗದ ಪ್ರಮಾಣ ಕಡಿಮೆಯಾಗುತ್ತದೆ ಎಂದರು. 


ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

ಅರಸೀಕೆರೆ ತಾಲ್ಲೂಕಿನ ಬೆಂಡೇಕರೆ ಸಮೀಪದ ತೋಟದಲ್ಲಿ ಬೆಂಕಿ ರೋಗಕ್ಕೆ ತುತ್ತಾಗಿರುವ ತೆಂಗಿನ ಮರ

Share:

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....