ಬುಧವಾರ, ಏಪ್ರಿಲ್ 19, 2017

ಇಂಗು ಗುಂಡಿಗೆ ಬಿದ್ದಿದ್ದ ಹಸುವಿನ ರಕ್ಷಣೆ

ಅರಸೀಕೆರೆ ತಾಲ್ಲೂಕು ದೊಡ್ಡಮೇಟಿಕುರ್ಕೆ ಗ್ರಾಮದ ಹೊರವಲಯದಲ್ಲಿರುವ ತೋಟವೊಂದರಲ್ಲಿ, ವೇದಾವತಿ ನದಿ ಪುನಶ್ಚೇತನ 2ನೇ ಹಂತದ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ 15 x 3 ಅಡಿ ಆಳದ ಮಳೆನೀರು ಇಂಗು ಗುಂಡಿಗೆ ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ಹಸುವೊಂದು ಕಾಲುಜಾರಿ ಬಿದ್ದಿತ್ತು. ಸ್ಥಳೀಯ ಗ್ರಾಮಸ್ಥರು ಜೆಸಿಬಿ ಯಂತ್ರ ಬಳಸಿ 4 ಗಂಟೆಗೂ ಅಧಿಕ ಸಮಯ ಹರಸಾಹಸ ಪಟ್ಟು, ಇಂಗು ಗುಂಡಿಗೆ ನಿರ್ಮಿಸಿದ್ದ ಸಿಮೆಂಟ್ ರಿಂಗುಗಳನ್ನು ಬೇರ್ಪಡಿಸಿ, ಗುಂಡಿಗೆ ಬಿದ್ದಿದ್ದ ಹಸುವನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದರು.  ಹಸುವಿಗೆ ಸಣ್ಣಪುಟ್ಟ ಗಾಯವಾಗಿದ್ದು ವೈದ್ಯಕೀಯ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದೆ.

(ಚಿತ್ರ/ಮಾಹಿತಿ : ಮಾಡಾಳು ನಂದೀಶ)




Share:

ಈ ವಾರದ ಜನಪ್ರಿಯ ಪೋಸ್ಟ್‌ಗಳು

ನಮ್ಮ ವೆಬ್ ಪುಟಗಳ ವೀಕ್ಷಣೆ ಸಂಖ್ಯೆ

ಅರಸೀಕೆರೆ.in ಆಂಡ್ರಾಯಿಡ್ ಮೊಬೈಲ್ ಆಪ್

ಅರಸೀಕೆರೆ.in ಇದೀಗ ಆಂಡ್ರಾಯಿಡ್ ಆಪ್‌ನಲ್ಲಿ

ಅರಸೀಕೆರೆಯ ಸುದ್ದಿಸಮಾಚಾರಗಳ ವೆಬ್ ಪುಟ www.arsikere.in ಇದೀಗ ಯಾವುದೇ ಬ್ರೌಸರ್ ಗಳ ಅವಶ್ಯಕತೆ ಇಲ್ಲದೇ ಆಂಡ್ರಾಯಿಡ್ ಆಪ್ ಮೂಲಕ  ಅತ್ಯಂತ ಸುಲಭವಾಗಿ ವೀಕ್ಷಿಸಬಹುದು....